ನಾಲ್ವಾಡಗಲ್ಲಿಯ ಕಾಮರತಿ ಉತ್ಸವಕ್ಕೆ ಶತಮಾನೋತ್ಸವದ ಸಂಭ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ನಾಲ್ವಾಡಗಲ್ಲಿಯ ಕಾಮರತಿ ಉತ್ಸವದ ಶತಮಾನೋತ್ಸವದ ಸಂಭ್ರಮದ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

Advertisement

ಭವ್ಯ ರಂಗಸಜ್ಜಿಕೆಯಲ್ಲಿ ಕೊಪ್ಪಳದ ಶ್ರೀ ಅಭಿನವ ಇವೆಂಟ್ಸ್ನ ಭಾಷಾ ಹಿರೇಮನಿ, ಗಾಯಕಿಯ ಧ್ವನಿಯಲ್ಲಿ ಗದುಗಿನ ಯುವ ಪ್ರತಿಭೆ ಖಾಜೇಸಾಬ ಬೂದಿಹಾಳ, ಬೆಂಗಳೂರಿನ ಗಾಯಕಿ ಅಶ್ವಿನಿ ಭಾಸ್ಕರ್, ನವಲಗುಂದದ ಗಾಯಕಿ ಸಲ್ಮಾ, ಮಂಜುನಾಥ ಆಗೋಲಿ ಅವರಿಂದ ಕಾಮಿಡಿ, ಜಾನಪದ ಕಲಾವಿದ ಮಂಜುನಾಥ ಹಿರೇಮಠ ಮುಂತಾದವರು ಪ್ರಸ್ತುತಪಡಿಸಿದ ರಸಮಂಜರಿ ಕಾರ್ಯಕ್ರಮ ಜನಮನ ಸೆಳೆಯಿತು. ಶಿವಯೋಗಿ ಟೆಂಗಿನಕಾಯಿ ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ದ್ರಾಕ್ಷಾಯಿಣಿ ಭದ್ರಕಾಳಮ್ಮನಮಠ, ಪಾರ್ವತಿ ಪಟ್ಟಣಶೆಟ್ಟಿ, ಲೀಲಾವತಿ ಟೆಂಗಿನಕಾಯಿ, ಮಹಾದೇವಿ ಜಿನಗಾ, ವಿಜಯಲಕ್ಷ್ಮಿಅ ಪರ್ವತಗೌಡ್ರ, ಸುವರ್ಣಾ ಹೊಸಂಗಡಿ, ಪ್ರೇಮಾ ದುಂದೂರ, ಗೀತಾ ನಾಲ್ವಾಡ, ಶೋಭಾ ವಾಲಿ, ವೀಣಾ ನಾಲ್ವಾಡ, ಬಸವಣ್ಣೆವ್ವ ಅಮರಗಟ್ಟಿ, ಉಮಾ ನಾಲ್ವಾಡ, ಮಂಜುಳಾ ಲಕ್ಕುಂಡಿ, ಪರವ್ವ ಅಣ್ಣಿಗೇರಿ, ರೇಖಾ ಲಕ್ಕುಂಡಿ, ಕವಿತಾ ಹುಳ್ಳಿಗೌಡ್ರ, ಕಸ್ತೂರಿ ಹರ್ತಿ, ಕವಿತಾ ಅಬ್ಬಿಗೇರಿಮಠ, ದ್ರಾಕ್ಷಾಯಣಿ ಹರ್ತಿ, ರತ್ನಕ್ಕ ಟೆಂಗಿನಕಾಯಿ ಗಂಗಾ ಟೆಂಗಿನಕಾಯಿ, ಅಪೇಕ್ಷಾ ಲಕ್ಕುಂಡಿ, ಸ್ನೇಹಾ ಜಿನಗಾ, ವಿದ್ಯಾ ಲಕ್ಕುಂಡಿ, ರಾಣಿ ಬೇಂದ್ರೆ, ಚೈತ್ರಾ ಜಿನಗಾ, ಉಮಾ ಬೇವೂರ, ಮಧುಶ್ರೀ ಭದ್ರಕಾಳಮ್ಮನಮಠ, ಶಾಂತಕ್ಕ ಕಟ್ಟಿಮನಿ, ವಿಜಕ್ಕ ಗೌಡ್ರ, ಶಾರದಾ ಕಪ್ಪತ್ತನವರ, ಶೃತಿ ಲಕ್ಕುಂಡಿ, ಸಂಜು ಟೆಂಗಿನಕಾಯಿ, ಸುವರ್ಣ ಲಕ್ಕುಂಡಿ, ಅವ್ವಕ್ಕ ದುಂದೂರ, ನೇತ್ರಾ ಚೆನ್ನವೀರಶೆಟ್ಟರ, ಅಶ್ವಿನಿ ಚವಡಿ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here