ಚಾಮರಾಜನಗರ:- ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ಮನೆಯ ಗೋಡೆಯೊಂದು ಕುಸಿತಗೊಂಡಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
Advertisement
ಜಿಲ್ಲೆಯ ಬೇಗೂರು ಹೊನ್ನೂರು ತೆಳ್ಳನೂರು ಗ್ರಾಮದಲ್ಲಿ ಈ ಘಟನೆ ಜರುಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜಿಲ್ಲೆಯ ಸಂತೆಮರಹಳ್ಳಿ ಸಮೀಪದ ತೆಳ್ಳನೂರು ನಿವಾಸಿ ಸುಬ್ಬಮ್ಮ ಎನ್ನುವರರ ಮನೆ ಇದಾಗಿದ್ದು, ಘಟನೆಯಿಂದ ಮನೆಯಲ್ಲಿದ್ದ ವಿವಿಧ ಪಿಠೋಪಕರಣಗಳು ಹಾನಿಯಾಗಿದೆ.
ಘಟನೆ ಪರಿಣಾಮ ಸಂತ್ರಸ್ತೆ ಆಕ್ರಂದನ ಮುಗಿಲು ಮುಟ್ಟಿದೆ.