ಯುವಕರ ಸೆಲ್ಫಿ ಸ್ಪಾಟ್ ಆದ ಚಿಕ್ಲಿಹೊಳೆ ಜಲಾಶಯ: ಮತ್ತೆ ಹೆಚ್ಚಿದ ಪ್ರವಾಸಿಗರ ದಂಡು!

0
Spread the love

ಮಡಿಕೇರಿ: ಕಾವೇರಿ ನೀರಾವರಿ ನಿಗಮದ ನಿರ್ಲಕ್ಷ್ಯದಿಂದಾಗಿ ಹಿಂದೆ ಒಣಗುವ ಹಂತ ತಲುಪಿದ್ದ ಕುಶಾಲನಗರ ತಾಲೂಕಿನ ರಂಗಸಮುದ್ರದ ಸಮೀಪದ ಚಿಕ್ಲಿಹೊಳೆ ಜಲಾಶಯ ಈಗ ಮತ್ತೆ ಜೀವ ತುಂಬಿಕೊಂಡಿದೆ.

Advertisement

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ ಪರಿಣಾಮವಾಗಿ, ಈ ಜಲಾಶಯ ಎರಡನೇ ಬಾರಿಗೆ ಭರ್ತಿಯಾಗಿದೆ. ಕೊಡಗು ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿರುವುದರಿಂದ ಕಾಫಿ, ಕರಿಮೆಣಸು ಸೇರಿದಂತೆ ಹಲವಾರು ಬೆಳೆಗಳಿಗೆ ಹಾನಿ ಉಂಟಾದರೂ, ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿರುವುದು ರೈತರ ಮುಖದಲ್ಲಿ ಸಂತೋಷ ತಂದಿದೆ. 0.18 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯವಿರುವ ಈ ಜಲಾಶಯವು ಕಳೆದ ವರ್ಷ ಮೇ ತಿಂಗಳ ಅಂತ್ಯದ ವೇಳೆಗೆ ಸಂಪೂರ್ಣ ಖಾಲಿಯಾಗಿತ್ತು.

ಈ ಜಲಾಶಯದ ನೀರಿನಿಂದ ಸುಮಾರು 12 ಗ್ರಾಮಗಳ 2,137 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆ ಬೆಳೆಯಲಾಗುತ್ತದೆ. ಈಗ ನೀರಿನ ಮಟ್ಟ ತುಂಬಿ ಹರಿಯುತ್ತಿದ್ದರಿಂದ, ಸ್ಥಳೀಯ ರೈತರು ಹೊಸ ಭರವಸೆಯೊಂದಿಗೆ ಬೆಳೆಯ ತಯಾರಿಯಲ್ಲಿ ತೊಡಗಿದ್ದಾರೆ. ಇದೇ ವೇಳೆ, ಭರ್ತಿಯಾದ ಜಲಾಶಯದ ಸೌಂದರ್ಯಕ್ಕೆ ಮನಸೋತ ನೂರಾರು ಪ್ರವಾಸಿಗರು ಚಿಕ್ಲಿಹೊಳೆಗೆ ಧಾವಿಸುತ್ತಿದ್ದು, ಅರ್ಧಚಂದ್ರಾಕಾರದ ಆಕಾರದಲ್ಲಿ ಹರಿಯುವ ನೀರಿನ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here