ಚಿಕ್ಕಬಳ್ಳಾಪುರ: ಖದೀಮರಿಬ್ಬರು ಮಚ್ಚು ತೋರಿಸಿ ಯುವಕನಿಂದ ಹಣವನ್ನ ಕಸಿದು ಪರಾರಿಯಾದ ಘಟನೆ ಚಿಕ್ಕಬಳ್ಳಾಪುರ ತಾಲೂಕು ಕುಡುವತಿ ಗ್ರಾಮದ ಬಳಿ ನಡೆದಿದೆ. ಫೈನಾನ್ಸ್ ವಸೂಲಿ ಮಾಡುತ್ತಿದ್ದ ಯುವಕನಿಂದ ದರೋಡೆ ಮಾಡಲಾಗಿದ್ದು,
Advertisement
ರಾಬರಿ ಮಾಡಿ ಎಸ್ಕೇಪ್ ಆಗುತ್ತಿದ್ದ ಕಳ್ಳರನ್ನು ಹಿಡಿಯಲು ಸ್ಥಳೀಯರು ಯತ್ನಿಸಿದ್ದಾರೆ. ಈ ವೇಳೆ ಗ್ರಾಮಸ್ಥರ ಮೇಲೆ ಮುಚ್ಚಿನಿಂದ ಹಲ್ಲೆ ನಡೆಸಲು ಪ್ರಯತ್ನ ಮಾಡಿ ಪರಾರಿಯಾಗಿದ್ದಾರೆ. ಸದ್ಯ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಯಾಗಿದ್ದು, ನಂದಿ ಗಿರಿಧಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ನಂದಿಗಿರಿಧಾಮ ಠಾಣೆಯಲ್ಲಿ ಯುವಕ ದೂರು ನೀಡಿದ್ದಾನೆ.