ಚಿಕ್ಕೋಡಿ:- ಜಿಲ್ಲೆಯ ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದ ಜಳಕಿ ತೋಟದ ಬಳಿ ಕರೆಂಟ್ ವೈಯರ್ ತಗುಲಿ ಯುವ ರೈತ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
21 ವರ್ಷದ ಸದಾಶಿವ ಭೀಮಪ್ಪ ಜಳಕಿ ಸಾವನ್ನಪ್ಪಿದ ರೈತ. ಇವರು ಬಸ್ತವಾಡ ಗ್ರಾಮದ ನಿವಾಸಿ ಎನ್ನಲಾಗಿದೆ. ವಿದ್ಯುತ ತಂತಿ ಕಟ್ಟಾಗಿದ್ದನ್ನು ನೋಡದೆ ತನ್ನದೇ ಜಮೀನಿನಲ್ಲಿ ಹಾದು ಹೋಗುವಾಗ ತಂತಿಗೆ ತಾಗಿ ಯುವಕ ಸಾವನ್ನಪ್ಪಿದ್ದಾನೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹಾರುಗೇರಿ ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಸದಾಶಿವ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಹೆಸ್ಕಾಂ ಇಲಾಖೆಯಿಂದ ನೀಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.


