ಸ್ವರಾಲಯದಲ್ಲಿ ಬಾಲ ಸಾಧಕರಿಗೆ ಸನ್ಮಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಸುತಾರ ಮ್ಯೂಸಿಕ್ ಫೌಂಡೇಶನ್ ಆಶ್ರಯದಲ್ಲಿ ನಡೆಯುತ್ತಿರುವ ಸ್ವರಾಲಯ ಸಂಗೀತ ವಿದ್ಯಾ ಸಂಸ್ಥೆಯಲ್ಲಿ 2025-26ನೇ ಸಾಲಿನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ತಬಲಾವಾ ದನದ ವರ್ಗಗಳನ್ನು ಜೂನ್ 8ರಿಂದ ಪ್ರಾರಂಭಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮುಂಬಯಿ ಇವರು ಏರ್ಪಡಿಸಿದ ಹಿಂದೂಸ್ತಾನಿ ತಬಲಾ ಪ್ರವೇಶಿಕಾ ಪ್ರಥಮಾದಲ್ಲಿ ಶಿವಾನಂದ ಭಾವಿಕಟ್ಟಿ ಪ್ರಥಮ ದರ್ಜೆಯಲ್ಲಿ ಹಾಗೂ ಆರಾಧ್ಯಾ ಅಳ್ಳೂಳ್ಳಿ ಪ್ರಾರಂಭಿಕಾ ಪರೀಕ್ಷೆಯಲ್ಲಿ ಪ್ರಥಮದ ರ್ಜೆಯಲ್ಲಿ ಉತ್ತೀರ್ಣರಾಗಿದ್ದಕ್ಕೆ ಪಂ. ಪ್ರಸಿದ್ಧ ತಬಲಾ ವಾದಕ ಗುರುನಾಥ ಸುತಾರ ಹಾಗೂ ಸ್ವರಾಲಯದ ಮುಖ್ಯಸ್ಥರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಾದ ಶ್ರೀನಿವಾಸ, ಪ್ರಣವ್, ಆರಾಧ್ಯ, ಪೃಧ್ವೀನಿ, ಅನ್ವಿಕಾ, ಋಷಿಕೇಶ, ತನ್ವೀ ಮೋನೆ ಸುಶ್ರಾವ್ಯವಾಗಿ ಶಾಸ್ತ್ರೀಯ ಸಂಗೀತ ನಡೆಸಿಕೊಟ್ಟರು. ಇವರಿಗೆ ತಬಲಾ ಸಾಥ ಶಿವಾನಂದ ಭಾವಿಕಟ್ಟಿ ನೀಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಕವಿತಾ ಭಾವಿಕಟ್ಟಿ, ಡಾ. ಗಂಗಾ ಅಳ್ಳೊಳ್ಳಿ ಇವರನ್ನು ಸ್ವರಾಲಯ ಸಂಗೀತ ವಿದ್ಯಾಲಯದಿಂದ ಸನ್ಮಾನಿಸಿ ಗೌರವಿಸಲಾಯಿತು.

ಮಾಲತಿ ಮ್ಯಾಗೇರಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ಭಾವಿಕಟ್ಟಿ, ವಿರೇಶ ಮ್ಯಾಗೇರಿ, ಅಶ್ವಿನಿ ಕೂಡ್ಲೆಪ್ಪನವರ, ರೇಣುಕಾ ಸುತಾರ ಹಾಗೂ ಸಂಗೀತಾಸಕ್ತರು ಪಾಲ್ಗೊಂಡಿದ್ದರು. ವೀಣಾ ಮ್ಯಾಗೇರಿ ಸ್ವಾಗತಿಸಿದರೆ, ತನ್ವೀ ಮೋನೆ ನಿರೂಪಿಸಿದರು. ಸಂಗೀತ ಗುರುಗಳಾದ ಪ್ರಸಾದ ಸುತಾರ ವಂದಿಸಿದರು.


Spread the love

LEAVE A REPLY

Please enter your comment!
Please enter your name here