ಕಾಸರಗೋಡು: ವ್ಯಕ್ತಿಯೊಬ್ಬರು ತಾವು 4ನೇ ತರಗತಿಯಲ್ಲಿ ಪೆಟ್ಟು ತಿಂದಿದ್ದನ್ನು ಮರೆಯದೇ 50ನೇ ವರ್ಷಕ್ಕೆ ಸೇಡು ತೀರಿಸಿಕೊಂಡ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಜರುಗಿದೆ.
62 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ವಲಿಯಪ್ಲಕ್ಕಲ್ ಬಂಧಿತರು. ಪೊಲೀಸರು ಇದು 50 ವರ್ಷದ ವ್ಯಕ್ತಿಯ ಬಾಲ್ಯದ ದ್ವೇಷದ ಪ್ರಕರಣ ಎಂದು ಹೇಳಿದ್ದಾರೆ .ಬಾಲಕೃಷ್ಣನ್ ಅವರ ಮಾಜಿ ಸಹಪಾಠಿ ವಿಜೆ ಬಾಬು ಮೇಲೆ ನಡೆದ ಹಲ್ಲೆ ಇದಾಗಿದೆ ಎಂದು ತಿಳಿದು ಬಂದಿದೆ.
ಬಾಲಕೃಷ್ಣನ್ 4 ನೇ ತರಗತಿಯಲ್ಲಿದ್ದಾಗ ನಡೆದ ಹಲ್ಲೆಗೆ ಪ್ರತೀಕಾರವಾಗಿ ಬಾಬು ಮೇಲೆ ಹಲ್ಲೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ನಾಲ್ಕನೇ ತರಗತಿಯ ಘಟನೆಯ ಬಗ್ಗೆ ಬಾಬು ಮತ್ತು ಬಾಲಕೃಷ್ಣನ್ ನಡುವೆ ಮಾತಿನ ಚಕಮಕಿ ನಡೆದಿತ್ತು ಮತ್ತು ಆ ಸಮಯದಲ್ಲಿ ವಿಷಯ ಇತ್ಯರ್ಥವಾಗಿದ್ದರೂ, ಬಾಲಕೃಷ್ಣನ್, ಮ್ಯಾಥ್ಯೂ ಜೊತೆಗೆ ಜೂನ್ 2 ರಂದು ಮತ್ತೆ ಗಲಾಟೆ ನಡೆದಿದೆ.
ಬಾಲಕೃಷ್ಣನ್ ಬಾಬುವಿನ ಕಾಲರ್ ಹಿಡಿದುಕೊಂಡರು, ಆದರೆ ಮ್ಯಾಥ್ಯೂ ಕಲ್ಲಿನಿಂದ ಮುಖ ಮತ್ತು ಬೆನ್ನಿಗೆ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.