ಬೆಂಗಳೂರು:ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಾಜು ಕಾಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಳೆದ ವಾರ ನಗರದಲ್ಲಿ ಕಾಲ್ತುಳಿತದ ಘೋರ ಘಟನೆ ನಡೆದು 11 ಜನ ಸಾವನ್ನಪ್ಪಿದ್ದು ಅತ್ಯಂತ ದುಃಖಕರ ಸಂಗತಿ,
Advertisement
ಯಾರೂ ಹೀಗಾಗುತ್ತದೆ ಅಂತ ಅಂದುಕೊಂಡಿರಲಿಲ್ಲ, ಜನ ನಿರೀಕ್ಷೆಗಿಂತ ಹೆಚ್ಚು ಸೇರಿದ್ದಕ್ಕೆ ಅನಾಹುತ ಸಂಭವಿಸಿದೆ, ಅನಾಹುತ ನಡೆಯುವ ಬಗ್ಗೆ ಗೊತ್ತಿದ್ದರೆ ಸತ್ಕಾರ ಕೂಟವನ್ನು ಸರ್ಕಾರ ಆಯೋಜಿಸುತ್ತಿರಲಿಲ್ಲ ಎಂದರು.
ಇದೊಂದು ಆಕಸ್ಮಿಕ ಘಟನೆ, ನಮ್ಮ ಯುವಕರಲ್ಲಿ ತಾಳ್ಮೆ ಕಡಿಮೆ, ಆದರೆ ನಡೆದ ದುರಂತಕ್ಕಾಗಿ ಯಾರೂ ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಇಂಥ ಘಟನೆಗಳು ಮರುಕಳಿಸಿದ ಹಾಗೆ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.