ಚಿತ್ರದುರ್ಗ: ಗುಟ್ಕಾ ಖರೀದಿ ವಿಚಾರಕ್ಕೆ ಯುವಕನ ಕೊಲೆ!

0
Spread the love

ಚಿತ್ರದುರ್ಗ: ಗುಟ್ಕಾ ಖರೀದಿ ವಿಚಾರಕ್ಕೆ ಯುವಕನ ಕೊಲೆ ಮಾಡಿರುವ ಘಟನೆ ಹೊಸದುರ್ಗ ತಾಲ್ಲೂಕಿನ ಮತ್ತೋಡು ಗ್ರಾಮದಲ್ಲಿ ನಡೆದಿದೆ. ಸೋಮಶೇಖರ್ (25) ಮೃತಪಟ್ಟ ವ್ಯಕ್ತಿಯಾಗಿದ್ದು, ಮೃತ ಸೋಮಶೇಖರ್ ನ ತಮ್ಮ ನಾಗರಾಜ್ ಗುಟ್ಕಾ ತರಲು ಹೋದಾಗ, ನಾಗರಾಜ್ ಗೆ ಅಂಗಡಿ ಮಾಲೀಕ ಫೋನ್ ಪೇ ಇಲ್ಲ ಹಣ ಕೊಡುವಂತೆ ಸೂಚನೆ ನೀಡಿದ್ದಾರೆ.

Advertisement

ಈ ವೇಳೆ ಫೋನ್ ಪೇನಲ್ಲಿ ಹಣ ಇಲ್ಲ ಎಂದಿದ್ದು, ಈ ವೇಳೆ ಅಂಗಡಿಯಲ್ಲಿದ್ದ ರಘು ಎಂಬಾತನಿಂದ ನಾಗರಾಜ್ ಮೇಲೆ ಹಲ್ಲೆ ಮಾಡಲಾಗಿದೆ. ಈ ವೇಳೆ ಜಗಳ ಬಿಡಿಸಲು ನಾಗರಾಜ್ ನ ಅಣ್ಣ ಸೋಮಶೇಖರ್ ಬಂದಿದ್ದಾರೆ. ಈ ವೇಳೆ ರಘು, ಮಂಜುನಾಥ್, ಗವಿ ರಂಗನಾಥ್ ಹಾಗೂ ಶಶಿಕುಮಾರ್ ರಿಂದ ಸೋಮಶೇಖರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ನಂತರ ಗಂಭೀರವಾಗಿ ಗಾಯಗೊಂಡ ಸೋಮಶೇಖರ್ʼನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಸೋಮಶೇಖರ್ ಸಾವನ್ನಪ್ಪಿದ್ದಾನೆ. ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here