ಚಿತ್ರದುರ್ಗ: ನದಿ ಪಾತ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯೊಬ್ಬ ನೀರುಪಾಲಾಗಿರುವ ಘಟನೆ ಚಿತ್ರದುರ್ಗದ ಕೆಲ್ಲೋಡು ಬಳಿಯ ವೇದಾವತಿ ನದಿ ಪಾತ್ರದಲ್ಲಿ ನಡೆದಿದೆ. ಜಾನಕಲ್ ಗ್ರಾಮದ ಶಿವು ನೀರಲ್ಲಿ ಕೊಚ್ಚಿ ಹೋದವರು. ತುಂಬಿ ಹರಿಯುತ್ತಿದ್ದ ವೇದವತಿ ನದಿ ನೀರಲ್ಲಿ ಮೀನಿಗಾಗಿ ಬಲೆ ಹಾಕುವಾಗ ಶಿವು ಮುಗ್ಗರಿಸಿ ಬಿದ್ದಿದ್ದಾನೆ.
Advertisement
ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ನದಿ ಪಾತ್ರಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಕೊಚ್ಚಿ ಹೋದ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಶ್ರೀರಾಂಪುರ ಪೊಲೀಸ್ ಠಾಣೆ ಪಿಎಸ್ಐ ಮಧು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.