ಯುವನಿಧಿ, ಅನ್ನಭಾಗ್ಯ, ಗೃಹಲಕ್ಷ್ಮೀ ಕೊಡ್ತೀವಿ ಅಂತ ಸಿಎಂ ಟೋಪಿ ಹಾಕಿದ್ರು: ಪ್ರತಾಪ್ ಸಿಂಹ ವ್ಯಂಗ್ಯ

0
Spread the love

ಮೈಸೂರು: ಯುವನಿಧಿ, ಅನ್ನಭಾಗ್ಯ, ಗೃಹಲಕ್ಷ್ಮೀ ಕೊಡ್ತೀವಿ ಅಂತ ಸಿಎಂ ಟೋಪಿ ಹಾಕಿದ್ರು ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜನರ ತಲೆ ಮೇಲೆ ಸಾಲ ಹೆಚ್ಚಾಗಿದೆ, ಕೊಲೆ ಸುಲಿಗೆ ಜಾಸ್ತಿಯಾಗಿದೆ, ಯುವನಿಧಿ ಕೊಡ್ತೀವಿ ಅಂತ ಯುವಕರಿಗೆ ಟೋಪಿ ಹಾಕಿದ್ದು, ಅನ್ನಭಾಗ್ಯ, ಗೃಹಲಕ್ಷ್ಮೀ ಕೊಡ್ತೀವಿ ಅಂತ ಟೋಪಿ ಹಾಕಿದ್ರು, ಇದನ್ನು ಬಿಟ್ಟು ಸಿಎಂ ಏನು ಮಾಡಲಿಲ್ಲ ಅಂತ ವ್ಯಂಗ್ಯವಾಡಿದ್ದಾರೆ.

Advertisement

ಮೋದಿ ಸಾಧನೆಯನ್ನು, ಕೊಡುಗೆಗಳನ್ನು ಅಳೆಯುವ ಅರ್ಹತೆ ಸಿಎಂ ಸಿದ್ದರಾಮಯ್ಯಗಿಲ್ಲ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ. ಜನರಿಗೆ ಪ್ರತಿನಿತ್ಯ ಟೋಪಿ ಹಾಕುವ ವ್ಯಕ್ತಿಗೆ ಮೋದಿ ಸಾಧನೆ ಅಳೆಯುವ ಅರ್ಹತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರು-ಮೈಸೂರು ಹೈವೇ ಮಾಡಿದ್ದು ಮೋದಿ, ರಿಂಗ್ ರೋಡ್ ಮಾಡಿದ್ದು ಮೋದಿ, ಮೈಸೂರು ಏರ್ ಪೋರ್ಟ್‌ಗೆ ವಿಮಾನ ಬರಲು ಕಾರಣ ಮೋದಿ, ಪಾಸ್ ಪೋರ್ಟ್ ಸೇವೆ ಕೇಂದ್ರಕ್ಕೆ ಕಾರಣ ಮೋದಿ, ಹಳೇ ಡಿಸಿ ಆಫೀಸ್ ಮ್ಯೂಸಿಯಂ ಮಾಡಲು ಹಣ ಕೊಟ್ಟಿರೋದು ಮೋದಿ, ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ 45 ಕೋಟಿ ಹಣ ಕೊಟ್ಟಿದ್ದು ಮೋದಿ ಅಂತ ಪ್ರತಾಪ್ ಸಿಂಹ ಮೋದಿ ಸಾಧನೆಗಳ ಪಟ್ಟಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here