ಬೆಂಗಳೂರು: ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಮೀಟಿಂಗ್ ಹಾಲ್ ಅನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉದ್ಘಾನೆ ಮಾಡಿದರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಟೇಪ್ ಕತ್ತರಿಸಲು ಕತ್ತರಿ ಕೊಟ್ಟರು. ಈ ವೇಳೆ, ನನ್ನಿಂದಲೇ ಟೇಪ್ ಕಟ್ ಮಾಡಿಸುತ್ತಿದ್ದೀರಾ ಎಂದು ನಗುತ್ತಾ ಕೇಳಿದರು.
Advertisement
ಮೀಟಿಂಗ್ ಹಾಲ್ ಅನ್ನು ಸಿದ್ದರಾಮಯ್ಯ ಅವರು ಉದ್ಘಾಟಿಸುವ ಬದಲು ಡಿಕೆ ಶಿವಕುಮಾರ್ ಅವರು ಉದ್ಘಾಟನೆ ನೆರವೇರಿಸಿದರು. ಸ್ವತಃ ಸಿದ್ದರಾಮಯ್ಯ ಅವರೇ ಡಿಕೆ ಶಿವಕುಮಾರ್ ಅವರಿಗೆ ಉದ್ಘಾಟಿಸುವ ಅವಕಾಶವನ್ನು ನೀಡಿದರು. ಈ ವೇಳೆ ನನ್ನಿಂದಲೇ ಟೇಪ್ ಕಟ್ ಮಾಡಿಸ್ತಿದ್ದೀರಾ ಎಂದು ನಗುತ್ತಾ ಕೇಳಿದ ಡಿಕೆ ಶಿವಕುಮಾರ್ಗೆ, ಹೌದಪ್ಪಾ ಎಂದು ನಗುತ್ತಾ ಹೇಳಿದ ಸಿದ್ದರಾಮಯ್ಯ ಹೇಳಿದರು.