ಬೆಂಗಳೂರು: ಕಾಂಗ್ರೆಸ್ ನಲ್ಲಿ ಅಧಿಕಾರಿಗಳ ಕಲೆಕ್ಷನ್ ಕೌಂಟರ್ಗಳು ಓಪನ್ ಆಗಿವೆ ಎಂದು ಬಿಲ್ ವಿಜಯೇಂದ್ರ ಹೇಳಿದ್ದಾರೆ.
Advertisement
ಈ ಸಂಬಂಧ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಶಾಸಕರಾದ ಬಿಅರ್ ಪಾಟೀಲ್ ಹಾಗೂ ರಾಜು ಕಾಗೆ ಅವರನ್ನು ಕರೆಸಿ ಮುನಿಸು ಬಗೆಹರಿಸುವ ಬಗ್ಗೆ ಮಾತಾಡುತ್ತಾರೆ,
ಅದರೆ ಭ್ರಷ್ಟಾಚಾರ ಎಲ್ಲ ಇಲಾಖೆಗಳನ್ನು ಮೆತ್ತಿಕೊಂಡಿದೆ ಮತ್ತು ಅಧಿಕಾರಿಗಳು ಕಲೆಕ್ಷನ್ ಕೌಂಟರ್ಗಳನ್ನು ತೆರೆದುಕೊಂಡು ಕೂತಿದ್ದಾರೆ ಎಂದರು. ಇನ್ನೂ ಇಲ್ಲಿ ತಿನ್ನಲು ಸಾಕಾಗುತ್ತಿಲ್ಲ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಲಿದ್ದಾರೆಯೇ? ಎಂದು ವಿಜಯೇಂದ್ರ ಮಾರ್ಮಿಕವಾಗಿ ಪ್ರಶ್ನಿಸಿದರು.
ಇನ್ನೂ ವಸತಿ ಇಲಾಖೆಯ ಭ್ರಷ್ಟಾಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದ್ದು, ಇಲಾಖಾ ಸಚಿವರ ರಾಜೀನಾಮೆಗೆ ವಿಪಕ್ಷ ಬಿಜೆಪಿ ಆಗ್ರಹಿಸಿದೆ..