ವಿಜಯಸಾಕ್ಷಿ ಸುದ್ದಿ, ಗದಗ : ಬೇಸಿಗೆ ರಜೆಯ ಬಳಿಕ ಗದುಗಿನ ಸೇವಾ ಭಾರತಿ ಟ್ರಸ್ಟ್ ನ ಅರುಣೋದಯ ವಿಶೇಷ ಮಕ್ಕಳ ಶಾಲೆಯ ವಿಶೇಷ ಅಗತ್ಯವುಳ್ಳ ಮಕ್ಕಳು ಶಾಲಾ ಪ್ರಾರಂಭೋತ್ಸವಕ್ಕೆ ಉತ್ಸಾಹದೊಂದಿಗೆ ಆಗಮಿಸಿದರು.
ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಲುಕ್ಕಣಸಾ ರಾಜೋಳಿ, ಕಾರ್ಯದರ್ಶಿ ಜಯರಾಜ ಮುಳಗುಂದ, ಸದಸ್ಯರಾದ ಡಾ. ಉಮೇಶ ಹಾದಿ ಅವರು ಮನೆಯಿಂದ ಶಾಲೆಗೆ ಬಂದಿಳಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಗುಲಾಬಿ ಹೂವು ಕೊಡುವ ಮೂಲಕ ಶಾಲೆಗೆ ಬರಮಾಡಿಕೊಂಡರು.
ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು ಮಕ್ಕಳಿಗೆ ಶುಭ ಹಾರೈಸಿ ವಿಶೇಷ ಅಗತ್ಯವುಳ್ಳ ಈ ಮಕ್ಕಳು ಮಾನಸಿಕವಾಗಿ ಸದೃಢವಾಗಿ ಎಲ್ಲ ಮಕ್ಕಳಂತೆ ಸಹಜ ಜೀವನ ನಡೆಸುವಂತಾಗಲಿ, ಮಕ್ಕಳ ಬುದ್ಧಿಮಟ್ಟ,ಜ್ಞಾನ ಕೌಶಲ್ಯ ವೃದ್ಧಿಯಾಗಿ ಉತ್ತಮ ಪ್ರಜೆಗಳಾಗಿ ಬಾಳಲಿ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ, ಶಿಕ್ಷಕ ಶಿಕ್ಷಕಿಯರಲ್ಲದೆ, ಪಾಲಕ ಪೋಷಕರು, ಅಟೋ ಚಾಲಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.