ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ 14 ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಬುಧವಾರ ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅವರಿಗೆ ಮನವಿ ಸಲ್ಲಿಸಿದರು.
ಪ್ರಮುಖ ಬೇಡಿಗಳಾದ ಪಿಂಚಣಿ ಸೌಲಭ್ಯ, ಆರೋಗ್ಯ ವಿಮೆ, ಎಸ್ಡಿಎ ಹುದ್ದೆ ಸೃಷ್ಟಿ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಕೋಡ್ಗಳನ್ನು ರದ್ದುಗೊಳಿಸಿ ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಅರ್ಕಸಾಲಿ, ಮಾಂತೇಶ ಸುಣಗಾರ, ಮಹೇಶ ಮೂಲಿಮನಿ, ನಿಂಗರಾಜ ಬಾಗವಾಡ, ಶಂಕ್ರಪ್ಪ ಗೋಣೆಪ್ಪನವರ, ಸಿದ್ದು ಹರದಗಟ್ಟಿ, ಹನಮಂತಗೌಡ ಮರಲಿಂಗನಗೌಡ್ರ, ಶಂಕ್ರಪ್ಪ ಶಿರಹಟ್ಟಿ, ಕಿರಣಗೌಡ ಪಾಟೀಲ, ನಾಗರಾಜ ಜಾಡರ, ಹಾಲೇಶ ಪಾಟೀಲ, ಸಿದ್ದರಾಮಗೌಡ ಪಾಟೀಲ ಮತ್ತಿತರರು ಇದ್ದರು.