ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಪರ ಅಭಿವೃದ್ಧಿ ಕಾರ್ಯಗಳಿಗೆ ಕರ್ನಾಟಕ ಸರ್ಕಾರದಿಂದ ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಮಟ್ಟದ ಸಮಿತಿಗಳನ್ನು ಆಯ್ಕೆ ಮಾಡಲಾಗಿದೆ.
Advertisement
ಗದಗ ಜಿಲ್ಲೆಯಲ್ಲಿ ಒಟ್ಟು ಐದು ಜನರನ್ನು ಕನ್ನಡ ಜಾಗೃತಿ ಸಮಿತಿಗೆ ಆಯ್ಕೆ ಮಾಡಲಾಗಿದೆ. ಹಿರಿಯರು, ಬಸವ ಅನುಯಾಯಿಗಳು ಹಾಗೂ ನಿವೃತ್ತ ಇಂಜಿನಿಯರಾದ ಅಶೋಕ ಬರಗುಂಡಿ, ಯುವ ಹೋರಾಟಗಾರ ಮುತ್ತು ಬಿಳೆಯಳ್ಳಿ, ಪಿ.ಪಿ.ಜಿ ಕಲಾ ಕಾಲೇಜಿನ ಪ್ರಾಚಾರ್ಯ ರಾಜಶೇಖರ ದಾನರಡ್ಡಿ, ಸಾಮಾಜಿಕ ಹೋರಾಟಗಾರ ಮುತ್ತಣ್ಣ ಹಾಳಕೇರಿ ಮುಂಡರಗಿ, ಮಹಿಳಾ ಹೋರಾಟಗಾರ್ತಿ ಲಾಡಮಾ ನದಾಫ್ ಗದಗ ಇವರನ್ನು ಆಯ್ಕೆ ಮಾಡಿರುವ ಸರ್ಕಾರಕ್ಕೆ ಹಾಗೂ ಸಮಿತಿಯ ಎಲ್ಲ ಸದಸ್ಯರಿಗೆ ಆನಂದ ಶಿಂಗಾಡಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕನ್ನಡ ಉಳಿವಿಗಾಗಿ, ಕನ್ನಡದ ಅಭಿವೃದ್ಧಿಗಾಗಿ ಸಮಿತಿಯ ಸದಸ್ಯರು ತಮ್ಮ ಸೇವೆಯನ್ನು ಮುಡಿಪಾಗಿಡಲಿ ಎಂದು ಗದಗ ಜಿಲ್ಲಾ ಛಲವಾದಿ ಮಹಾಸಭಾ ಆಶಿಸಿದೆ.


