ಬಸವರಾಜ ಗುಡ್ಲಾನೂರರಿಗೆ ಅಭಿನಂದನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ತಿಮ್ಮಾಪೂರ ಗ್ರಾಮದ ಬಸವರಾಜ ಗುಡ್ಲಾನೂರ 2024-25ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪಡೆದಿರುವ ನಿಮಿತ್ತ ಮಾರುತೇಶ್ವರ ಜಾತ್ರಾ ಮಹೋತ್ಸವದ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಗ್ರಾಮಸ್ಥರು, ಸ್ನೇಹಿತರು ನಾಟಕ ಸಂಘದ ಮಾಲಕರು ಸನ್ಮಾನಿಸಿ ಅಭಿನಂದಿಸಿದರು.

Advertisement

ಈ ಸಂದರ್ಭದಲ್ಲಿ ಬಸವರಾಜ ಗುಡ್ಲಾನೂರ ಮಾತನಾಡಿ, ಉತ್ತಮ ಕೆಲಸವನ್ನು ಮಾಡಿದರೆ ಪ್ರಶಸ್ತಿಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಸರಕಾರದ ಕೆಲಸ ದೇವರ ಕೆಲಸ ಎಂದು ಪ್ರಾಮಾಣಿಕತೆಯಿಂದ ನಾವು ಯಾವುದೇ ಇಲಾಖೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡಬೇಕು. ಈ ಪ್ರಶಸ್ತಿಯನ್ನು ನಮ್ಮ ಗ್ರಾಮದ ಆರಾಧ್ಯ ದೇವರಾದ ಮಾರುತೇಶ್ವರನಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಬಾಬರಿ, ಸ್ನೇಹಿತರಾದ ಸುರೇಶ ಮುಧೋಳ, ಪರಸಪ್ಪ ಹಳ್ಳಿಕೇರಿ, ಹನುಮೇಶ ಗಂಗರಾತ್ರಿ, ಅಜ್ಜಪ್ಪ ಜೋಗಿನ, ಜಂಬಣ್ಣ ಕಟಗಿ, ಸತೀಶ ಜೋಗಿನ, ಮಲ್ಲಪ್ಪ ಯತ್ನಟ್ಟಿ, ಮಲ್ಲಪ್ಪ ಉಳಿಗೇರ, ಈರಪ್ಪ ಕೊಪ್ಪದ, ಕರಿಯಪ್ಪ ಬಾಬರಿ, ರಮೇಶ ಜೋಗಿನ, ಗೂಳಪ್ಪ ಹುಚ್ಚಪ್ಪನವರ, ಮಲ್ಲಪ್ಪ ಮಡಿವಾಳರ, ಯಮನೂರಪ್ಪ ಗದಗ, ಶರಣಪ್ಪ ಜೋಗಿನ, ಬಾಳಪ್ಪ ಗಂಗರಾತ್ರಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here