ಬರ ಪರಿಹಾರ ವಿಚಾರದಲ್ಲಿ ಕಾಂಗ್ರೆಸ್ ರೈತರನ್ನು ಸತಾಯಿಸುತ್ತಿದೆ: ಆರ್ ಅಶೋಕ್

0
Spread the love

ಬಳ್ಳಾರಿ:- ಆರ್ ಅಶೋಕ್ ಅವರು ಬರವೀಕ್ಷಣೆ ಕೈಗೊಂಡಿದ್ದಾರೆ. ಬಳ್ಳಾರಿಯ ಸಂಡೂರು ತಾಲೂಕಿನ ಡಿ.ಅಂತಾಪುರ ಗ್ರಾಮದಲ್ಲಿ ಬರ ವೀಕ್ಷಣೆ ಮಾಡಿದ್ದಾರೆ. ಮಳೆಯಿಲ್ಲದ ಬೆಳೆ ಹಾನಿಯಾಗಿರೊ ಪ್ರದೇಶಗಳಿಗೆ ಭೇಟಿ ನೀಡಿ, ಆರ್‌.ಅಶೋಕ್ ಪರಿಶೀಲನೆ ಮಾಡಿದ್ದಾರೆ. ಬೆಳೆ ಹಾನಿಗೊಳಗಾದ ಜಮೀನಿನ ರೈತರ ಸಮಸ್ಯೆಯನ್ನು ಅಶೋಕ್ ಆಲಿಸಿದ್ದಾರೆ.

Advertisement

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಬರ ಸಮೀಕ್ಷೆಯನ್ನು ನಿಯಮ ಪ್ರಕಾರ ಮಾಡಿಲ್ಲ, ರೈತರ ಜಮೀನಿಗೆ ಭೇಟಿ ನೀಡದೆ ಸಮೀಕ್ಷೆ ವರದಿ ತಯಾರಿಸಲಾಗಿದೆ. ರಾಜ್ಯ ಸರ್ಕಾರವು ಕೂಡ ಬರ ಪರಿಹಾರ ನೀಡದೇ ರೈತರನ್ನು ಸತಾಯಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಆರ್.ಅಶೋಕ್ ಹರಿಹಾಯ್ದಿದ್ದಾರೆ.


Spread the love

LEAVE A REPLY

Please enter your comment!
Please enter your name here