ಬೆಂಗಳೂರು: ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಕಾಂಗ್ರೆಸ್’ಗೆ ಇಲ್ಲ ಎಂದು ಸಂಸದ ಗೋವಿಂದ ಕಾರಜೋಳ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ರಿಗೆ ಅಪಮಾನ ಆಗಿದೆ ಅಂತ ದೇಶದ ಉದ್ದಗಲಕ್ಕೆ ಬೊಬ್ಬೆ ಹಾಕಿ ಕಾಂಗ್ರೆಸ್ನವರು ಆರೋಪ ಮಾಡ್ತಿದ್ದಾರೆ. ಅಂಬೇಡ್ಕರ್ಗೆ ಹಣಕಾಸು ಇಲಾಖೆ ಕೊಡದೆ, ಕಾನೂನು ಇಲಾಖೆ ಕೊಟ್ರು. ಹೀಗೆ ಅವಮಾನ ಮಾಡಿದ್ದರಿಂದ ಅವರು ರಾಜೀನಾಮೆ ಕೊಟ್ಟು ಬಂದ್ರು ಎಂದು ಹೇಳಿದ್ದಾರೆ.
ಇನ್ನೂ ಅಂಬೇಡ್ಕರ್ ಅವರಿಗೆ ರಾಜ್ಘಾಟ್ನಲ್ಲಿ ಸಮಾಧಿಗೆ ಜಾಗ ಕೊಡಲಿಲ್ಲ. 5,000 ರೂ. ಬಾಡಿಗೆ ಕೊಟ್ಟು ಮುಂಬೈಗೆ ವಿಮಾನದ ಮೂಲಕ ಮೃತದೇಹ ತಂದು ಅವರ ಸಮಾಧಿ ಮಾಡಿದ್ದನ್ನು ಮರೆಯೋಕೆ ಆಗುವುದಿಲ್ಲ. ಕಾಂಗ್ರೆಸ್ ಉರಿಯುವ ಮನೆ, ಕಾಂಗ್ರೆಸ್ಗೆ ಹೋಗಬೇಡಿ ಎಂದು ಅಂಬೇಡ್ಕರ್ ಸಂದೇಶ ಕೊಟ್ಟಿದ್ರು. ವಿ. ಪಿ ಸಿಂಗ್ ಉಚ್ಚಾಟನೆ ಮಾಡಿದ್ರು, ದೇವರಾಜ್ ಅರಸು ಅವರನ್ನ ಕಾಂಗ್ರೆಸ್ನಿಂದ ಉಚ್ಚಾಟನೆ ಮಾಡಿದ್ರು.
ದೇವೇಗೌಡರನ್ನ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಉತ್ತರ ಕೊಡಬೇಕು. ಸಂವಿಧಾನವನ್ನ ಧರ್ಮ ಗ್ರಂಥ ಅಂತ ಹೇಳಿದ್ದು ಪ್ರಧಾನಿ ಮೋದಿಯವರು. ಅಂಬೇಡ್ಕರ್ ಅವರಿಗೆ ಅಮಿತ್ ಶಾ ಅವಮಾನ ಮಾಡಿಲ್ಲ. ಕಾಂಗ್ರೆಸ್ನವರ ಮೋಸ ಮಾಡುವ ವಿಚಾರಕ್ಕೆ ದಲಿತರು ಕಿವಿಗೊಡಬಾರದು. ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.