ಮುಳಗುಂದ ಪಟ್ಟಣದ ಆರ್.ಎನ್. ದೇಶಪಾಂಡೆ ಸರಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ಮಂಜೂರಾದ ಒಂದು ಕೊಟಿ ರೂ ವೆಚ್ಚದ ಸಮುದಾಯ ಭವನಕ್ಕೆ ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಸುಂಕಾಪೂರ ಭೂಮಿ ಪೂಜೆ ನೆರವೇರಿಸಿದರು. ಪ.ಪಂ ಸದಸ್ಯರಾದ ಎಸ್.ಸಿ. ಬಡ್ನಿ, ವಿಜಯ ನೀಲಗುಂದ, ಪ್ರಾಚಾರ್ಯ ಆರ್.ಎಂ. ಕಲ್ಲನಗೌಡರ, ಪ್ರಸನ್ನ, ಅನುಪಮಾ, ಎಂ.ಸಿ. ಶಿಂದೂರಿ, ವಿಠ್ಠಲ ಪವಾರ, ಕೆ.ಎಂ. ಶಿರೂರ, ಹುಡ್ಕೋ ಅಭಿಯಂತರರಾದ ಶ್ರೀನಿವಾಸ ಪಾಟೀಲ್ ಇದ್ದರು.