ಮುಸ್ಲಿಮರ ತುಷ್ಟಿಕರಣಕ್ಕೆ, ಸಂವಿಧಾನ ಬದಲಾಯಿಸುವ ಮಟ್ಟಕ್ಕೂ ಇಳಿಯುತ್ತಾರೆ ಕಾಂಗ್ರೆಸ್ಸಿಗರು: ಸಿಟಿ ರವಿ ಕಿಡಿ

0
Spread the love

ಬೆಂಗಳೂರು: ಮುಸ್ಲಿಮರ ತುಷ್ಟಿಕರಣಕ್ಕೆ, ಸಂವಿಧಾನ ಬದಲಾಯಿಸುವ ಮಟ್ಟಕ್ಕೂ ಇಳಿಯುತ್ತಾರೆ ಕಾಂಗ್ರೆಸ್ಸಿಗರು ಎಂದು  ಪರಿಷತ್‌ ಸದಸ್ಯ ಸಿಟಿ ರವಿ ಡಿಕೆ ಶಿವಕುಮಾರ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು,

Advertisement

ತುಷ್ಟಿಕರಣ ನೀತಿಯ ಪರಾಕಾಷ್ಠೆ. ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾಯಿಸುತ್ತಾರಂತೆ ಉಪಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರು. ಮುಸ್ಲಿಮರ ತುಷ್ಟಿಕರಣಕ್ಕೆ, ಡಾ ಬಿ ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾಯಿಸುವ ಮಟ್ಟಕ್ಕೂ ಇಳಿಯುತ್ತಾರೆ ಕಾಂಗ್ರೆಸ್ಸಿಗಳು ಅನ್ನುವುದು ನಮ್ಮ ದೇಶದ ದುರಂತ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಡಿಕೆ ಶಿವಕುಮಾರ್‌ ಈ ರೀತಿಯ ಹೇಳಿಕೆ ನೀಡಯವ ಮೂಲಕ ಕಾಂಗ್ರೆಸ್ಸ್‌ನವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here