ಬೆಂಗಳೂರು:- BBMP ಜಾಗದಲ್ಲಿ ಮನೆ ಹಾಗೂ ಕಾಂಪೌಂಡ್ ನಿರ್ಮಾಣ ಮಾಡಿದ್ದನ್ನು ಪ್ರಶ್ನಿಸಿ ದೂರು ಕೊಟ್ಟಿದ್ದಕ್ಕೆ ಶಾಲಾ ಕಾಂಪೌಂಡ್ ಧ್ವಂಸ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ಘಟನೆ ಸಂಬಂಧ ಶಾಲಾ ಮಾಲೀಕ ಕಿರಣ್ ಕುಮಾರ್ ನೀಡಿದ ದೂರಿನ ಅನ್ವಯ ಮಾರತ್ ಹಳ್ಳಿ ಠಾಣೆಯಲ್ಲಿ ನವೀನ್ , ವಿಶ್ವನಾಥ್ , ಚಂದ್ರಶೇಖರ್ , ಚಂದ್ರು ಸೇರಿದಂತೆ ಹಲವರ ಮೇಲೆ FIR ದಾಖಲಾಗಿದೆ.
ಎಸ್, ಬೆಂಗಳೂರಿನ ಮಾರತ್ ಹಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಿಡ್ಸ್ ಮ್ಯಾನ್ಸನ್ ಮೆಕಾನಿಕ್ ಶಾಲೆ ಮುಂದಿರುವ ಬಿಬಿಎಂಪಿ ಜಾಗದಲ್ಲಿ ಸ್ಥಳೀಯರು ಅಕ್ರಮವಾಗಿ ಮನೆ ಹಾಗೂ ಕಾಂಪೌಂಡ್ ನಿರ್ಮಾಣ ಮಾಡಿದ್ದರು. ಈ ಬಗ್ಗೆ ಬಿಎಮ್ ಟಿ ಎಫ್ ಗೆ ಶಾಲಾ ಮಾಲೀಕ ದೂರು ಮಾಡಿದ್ದರು. ಹೀಗಾಗಿ ಪೊಲೀಸ್ ಸಮ್ಮುಖದಲ್ಲಿ ಬಿಎಂ ಟಿಎಫ್ ನಿಂದ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ತೆರವು ಮಾಡಲಾಗಿತ್ತು. ಅಲ್ಲದೇ ಇಲ್ಲಿ ತೆರವು ಕಾರ್ಯ ಮುಗಿಸಿ ಹೋಗುತ್ತಿದ್ದಂತೆ ಕಿಡಿಗೇಡಿಗಳು, ಜೆಸಿಬಿ ತಂದು ಕಿಡ್ಸ್ ಮ್ಯಾನ್ಸನ್ ಮೆಕಾನಿಕ್ ಶಾಲೆಯ ಕೌಂಪೌಂಡ್, ಕೆನೊಪಿ ಧ್ವಂಸ ಮಾಡಿದ್ದಾರೆ. ಈ ಶಾಲೆಯ ಮಾಲೀಕ ದೂರು ಕೊಟ್ಟಿದ್ದಕ್ಕೆ ಸ್ಥಳೀಯ ಜಮೀನ್ದಾರರಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಶಾಲೆಯಲ್ಲಿ ನರ್ಸರಿ ಹಾಗು ಪ್ರೀ ನರ್ಸರಿ ಮಕ್ಕಳಿದ್ರಂತೆ. ಇನ್ನೂ ಘಟನೆಯಿಂದ ಪೋಷಕರು ಮತ್ತು ಮಕ್ಕಳು ಹೆದರಿದ್ದು, ದೂರಿನ ಅನ್ವಯ ಹೆಚ್.ಎ.ಎಲ್ ಪೊಲೀಸರಿಂದ ತನಿಖೆ ಮುಂದುವರಿದಿದೆ.