ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳು ಸಾಧನೆಗೆ ಸತತ ಪ್ರಯತ್ನ ಬೇಕು. ಮಕ್ಕಳು ಪ್ರಾಥಮಿಕ ಹಂತದಲ್ಲಿ ಸತತ ಪ್ರಯತ್ನಶೀಲರಾಗಬೇಕು. ಅಂದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಫಾತೀಮಾ ಖವಾಸ ಹೇಳಿದರು.
ಅವರು ಪಟ್ಟಣದ ಬಿ.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಬದ್ರುನಿಸಾ ಯಳವತ್ತಿ ಗದಗ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನಿಮಿತ್ತ ಗೌರವಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಮಾ ಬ್ಯಾಳಿ, ಆಸ್ಮಾ ಸೌದತ್ತಿ, ಪೂಜಾ ಮ್ಯಾಗೇರಿ, ಗೀತಾ ಕುಲಕರ್ಣಿ ಇದ್ದರು.



