ಶ್ರೀಗುರು ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ

0
pattabhisheka
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಹಾತಲಗೇರಿ ರಸ್ತೆಯಲ್ಲಿರುವ ಕರಿಯಮ್ಮ ಕಲ್ಲು ಬಡಾವಣೆಯ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾ. 12ರಂದು ಮಂತ್ರಾಲಯ ಪ್ರಭು ಶ್ರೀಗುರು ರಾಘವೇಂದ್ರ ಮಹಾಸ್ವಾಮಿಗಳವರ ಪಟ್ಟಾಭಿಷೇಕ ಮಹೋತ್ಸವ ಸಮಾರಂಭದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಸಂಜೆ 6.30ಕ್ಕೆ ಶ್ರೀ ರಾಘವೇಂದ್ರ ಕಲಾ ಬಳಗದವರಿಂದ `ದಶರಥ ನಂದನ ಶ್ರೀರಾಮ’ ಎಂಬ ಸಂಗೀತ ರೂಪಕ(ನಾಟಕ) ಪ್ರಯೋಗ ಹಮ್ಮಿಕೊಳ್ಳಲಾಗಿದೆ.

Advertisement

ಸಂಗೀತ ರೂಪಕವನ್ನು ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಅವರು ರಚಿಸಿ ನಿರ್ದೇಶಿಸಿದ್ದಾರೆ. ಆರ್.ಎನ್.ಕೆ ಮಿತ್ರ ಮಂಡಳಿ ಸಹಕಾರದಲ್ಲಿ ಪ್ರಯೋಗವಾಗಲಿರುವ ರೂಪಕದಲ್ಲಿ ಶ್ರೀರಾಮ-ಮೌನೇಶ ಸಿ.ಬಡಿಗೇರ(ನರೇಗಲ್ಲ), ಲಕ್ಷ್ಮಣ-ಉಜ್ವಲ್ ಕಬಾಡಿ, ಭರತ-ಮನೋಜ್ ಕುಲಕರ್ಣಿ, ಸೀತೆ-ಅಂಕಿತಾ ಬೊಮ್ಮಣಗಿ, ದಶರಥ-ಅಂದಾನೆಪ್ಪ ವಿಭೂತಿ, ವಿಶ್ವಾಮಿತ್ರ-ಪ್ರೊ. ಎಮ್.ಎಸ್. ಕುಲಕರ್ಣಿ, ಕೈಕೇಯಿ- ಯಶೋಧಾ ಗುಮಾಸ್ತೆ, ಮಂಥರೆ-ರಕ್ಷಿತಾ ಕುಲಕರ್ಣಿ, ಅಹಲ್ಯೆ-ಕೀರ್ತಿ ಗುಮಾಸ್ತೆ, ಶೂರ್ಪನಖಿ- ಅನಘಾ ಕುಲಕರ್ಣಿ, ರಾವಣ-ವಿಶ್ವನಾಥ ಬೇಂದ್ರೆ, ಶಬರಿ-ಸುರಭಿ ಮಹಾಶಬ್ಧಿ, ವೇದವತಿ-ರಂಜಿತಾ ಕುಲಕರ್ಣಿ, ಅಗ್ನಿದೇವ-ಶ್ವೇತಾ ಸುರೇಬಾನ, ವಿಭಿಷಣ-ಅಮರೇಶ ರಾಮಪೂರ, ಮಾರೀಚ-ಪ್ರೊ. ಹೇಮಂತ ದಳವಾಯಿ, ಬಾಲರಾಮ-ಪೂರ್ಣಪ್ರಜ್ಞ ದೇಶಪಾಂಡೆ, ಬಾಲಲಕ್ಷö್ಮಣ-ಪ್ರಭುಗೌಡ, ಲವ- ಆರಾಧ್ಯ, ಕುಶ-ಅನನ್ಯ, ಹನುಮಂತ-ಶರಾವತಿ ಸುತಾರ ಹಾಗೂ ಅಯೋಧ್ಯೆಯ ಶ್ರೀರಾಮನಾಗಿ ಶುಭಾಂಗಿ ದ್ಯಾಮೇನಹಳ್ಳಿ ಅಭಿನಯಿಸಲಿದ್ದಾರೆ.

ನಾಟಕ ಪ್ರಯೊಗ ನಂತರ ಮಹಾಮಂಗಲಾರತಿ ಫಲ ಮಂತ್ರಾಕ್ಷತೆ ವಿತರಣೆ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಹರಿ ವಾಯು ಹಾಗೂ ರಾಯರ ಅನುಗ್ರಹಕ್ಕೆ ಪ್ರಾತ್ರರಾಗಬೇಕೆಂದು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ವಿನಂತಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here