ಬೆಂಗಳೂರು: ಭ್ರಷ್ಟಾಚಾರ ಆರೋಪ ಹೊಂದಿರುವ ವಿವಿಧ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ಇಂದು ಬೆಳಿಗ್ಗೆ ಲೋಕಾಯುಕ್ತ ಇಲಾಖೆ ದಾಳಿ ಮಾಡಿದೆ.
ಇಂದು ಬೆಳ್ಳಂ ಬೆಳಿಗ್ಗೆ ರಾಜ್ಯದ 10 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ಮಹತ್ತರ ದಾಖಲೆಗಳನ್ನು ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ. ಇಂದು ದಾಳಿ ನಡೆದ ಪ್ರಮುಖ ಸ್ಥಳಗಳು ಮತ್ತು ಅಧಿಕಾರಿಗಳ ವಿವರ ಹೀಗಿವೆ:
ಬೆಂಗಳೂರು: RTO ಸೂಪರಿಂಟೆಂಡೆಂಟ್ – ಕುಮಾರಸ್ವಾಮಿ.
ಮಂಡ್ಯ: ನಗರ ಪಾಲಿಕೆ CAO – ಪುಟ್ಟಸ್ವಾಮಿ.
ಬೀದರ್: ಕೃಷ್ಣಾ ಮೇಲ್ದಂಡೆ ಯೋಜನೆ ಮು.ಇಂಜಿನಿಯರ್ – ಪ್ರೇಮ್ ಸಿಂಗ್.
ಮೈಸೂರು: ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್ಪೆಕ್ಟರ್ – ರಾಮಸ್ವಾಮಿ ಸಿ.
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಪ್ರಾಧ್ಯಾಪಕ – ಸುಭಾಶ್ ಚಂದ್ರ.
ಧಾರವಾಡ: ಪ್ರಾ. ಪಶು ಕ್ಲಿನಿಕ್ ಹುಲಿಗೋಲ್ ಹಿರಿಯ ಪರೀಕ್ಷಕ – ಸತೀಶ್.
ಶಿವಮೊಗ್ಗ: SIMS ಮೆಡಿಕಲ್ ಕಾಲೇಜ್ FDA – ಲಕ್ಷ್ಮೀಪತಿ ಸಿ.ಎನ್.
ದಾವಣಗೆರೆ: APMC ಸಹಾಯಕ ನಿರ್ದೇಶಕ – ಪ್ರಭು ಜೆ.
ಮೈಸೂರು (ಮಡಿಕೇರಿ): PWD, ಸಹಾಯಕ ಇಂಜಿನಿಯರ್ – ಗಿರೀಶ್ ಡಿ.ಎಂ.
ಒಟ್ಟಾರೆ ಇಂದು ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು, ಮನೆ ಮತ್ತು ಕಚೇರಿಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು. ಭ್ರಷ್ಟ ಅಧಿಕಾರಿಗಳ ಮೇಲಿನ ಲೋಕಾ ದಾಳಿ ಮುಂದುವರಿದಿದೆ.


