Nelamangala: ಚಿರತೆ ದಾಳಿಗೆ ಹಸು ಬಲಿ: ಕಣ್ಣೀರು ಹಾಕಿದ ರೈತ!

0
Spread the love

ನೆಲಮಂಗಲ: ಹಾಡಹಗಲೇ ಚಿರತೆ ದಾಳಿಗೆ ಜಾನುವಾರು ಸಾವನ್ನಪ್ಪಿರುವ ಘಟನೆ ನೆಲಮಂಗಲ ತಾಲೂಕಿನ ಅರ್ಜುನ ಬೆಟ್ಟಹಳ್ಳಿಯಲ್ಲಿ ಜರುಗಿದೆ.

Advertisement

ಚಿರತೆ ದಾಳಿಯಿಂದ ಸಾವಿರಾರು ರೂಪಾಯಿ ಮೌಲ್ಯದ ಹಸು ಸಾವನ್ನಪ್ಪಿದ್ದು, ರೈತನ ಅಕ್ರಂದನ ಮುಗಿಲು ಮುಟ್ಟಿದೆ. ರೈತ ಸಿದ್ದಗಂಗಪ್ಪಗೆ ಸೇರಿದ ಜಾನುವಾರು ಇದಾಗಿದ್ದು, ಹಸು ಕಳೆದುಕೊಂಡ ರೈತ ಕಂಗಾಲಾಗಿ ಕಣ್ಣೀರು ಹಾಕಿದ್ದಾನೆ.

ಇನ್ನೂ ಚಿರತೆ ದಾಳಿಯಿಂದ ರೈತರು, ಗ್ರಾಮಸ್ಥರು ಭಯಬೀತರಾಗಿದ್ದು, ಮಾಹಿತಿ ತಿಳಿದರೂ ಸ್ಥಳಕ್ಕೆ ಬಾರದ ಅರಣ್ಯ ಅಧಿಕಾರಿಗಳ ವಿರುದ್ದ ರೈತರು ಆಕ್ರೋಶ ಹೊರ ಹಾಕಿದ್ದಾರೆ.


Spread the love

LEAVE A REPLY

Please enter your comment!
Please enter your name here