ವಿಜಯಸಾಕ್ಷಿ ಸುದ್ದಿ, ಮುಳಗುಂದ: ರೈತರು ಆರ್ಥಿಕವಾಗಿ ಸದೃಢರಾಗಲು ಹಸುಗಳು ಹಾಗೂ ಎತ್ತುಗಳ ಸಾಕಾಣಿಕೆ ಸಹಕಾರಿ ಎಂದು ಕಪ್ಪತ್ತಗುಡ್ಡ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಅವರು ಪಟ್ಟಣ ಸಮೀಪದ ಕಣವಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಗದಗ, ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಗದಗ, ಧಾರವಾಡ ಹಾಗೂ ಗದಗ, ಕಣವಿ ಸಹಕಾರಿ ಹಾಲು ಉತ್ಪಾದಕರ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ತಾಲೂಕು ಮಟ್ಟದ ಮಿಶ್ರ ತಳಿ ಹಸುಗಳ ಅಧಿಕ ಹಾಲು ಇಳುವರಿ ಸ್ಪರ್ಧೆ, ಜಾನುವಾರುಗಳ ಪ್ರದರ್ಶನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿಕೊಂಡು ಮಾತನಾಡಿದರು.
ಹಸುಗಳ ಸಾಕಾಣಿಕೆಯಿಂದ ಇಳಿಕೆಯಿಂದಲ್ಲದೆ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ನಮ್ಮ ಪೂರ್ವಜರು ಪ್ರತಿಯೊಂದು ಕುಟುಂಬದಲ್ಲಿ ಹಸು ಹಾಗೂ ಎತ್ತುಗಳ ಸಾಕಾಣಿಕೆಯಿಂದ ಆರ್ಥಿಕವಾಗಿ ಅಭಿವೃದ್ಧಿಯ ಜೊತೆಯಲ್ಲಿ, ಉತ್ತಮ ಆರೋಗ್ಯವಂತ ಬದುಕು ಬದುಕುತ್ತಿದ್ದರು. ಈಗ ಹಳ್ಳಿಗಳಲ್ಲಿ ಹಸುಗಳ ಇಳಿಕೆಯಿಂದ ಹಳ್ಳಿಗಳು ಅನಾಥಾಶ್ರಮಗಳಾಗಿ ಪರಿಣಮಿಸುತ್ತಿದ್ದು, ಹಸುಗಳ ಸಾಕಾಣಿಕೆಯಿಂದ ಭೂಮಿ ಫಲವತ್ತತೆ ಹೊಂದಲು ಸಾಧ್ಯ. ಇದರಿಂದ ಉತ್ತಮ ಇಳುವರಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಡಿ.ಆರ್. ಪಾಟೀಲ್ ಮಾತನಾಡಿ, ಹಿಂದಿನ ಕಾಲದ ರೈತರ ಜೀವನ ಶೈಲಿ ಮರಳಿಸಬೇಕಾದರೆ ಪ್ರತಿಯೊಬ್ಬರೂ ಹಸುಗಳನ್ನು ಸಾಕಾಣಿಕೆ ಮಾಡಬೇಕು. ಇದರಿಂದ ಆರ್ಥಿಕವಾಗಿ ಅಭಿವೃದ್ಧಿಗೆ ಸಹಕಾರಿಯಾಗುವುದು ಎಂದರು.
ಕೆ.ಸಿ.ಸಿ ಬ್ಯಾಂಕ್ ನಿರ್ದೇಶಕ ಸಿ.ಬಿ. ದೊಡ್ಡಗೌಡ್ರ ಮಾತನಾಡಿ, ಕೆ.ಸಿ.ಸಿ ಬ್ಯಾಂಕ್ ಸಹಯೋಗದಲ್ಲಿ ಜಾನುವಾರುಗಳ ಸಾಕಾಣಿಕೆಗೆ ಸಾಕಷ್ಟು ಸಹಾಯವನ್ನು ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಅಧ್ಯಕ್ಷತೆಯನ್ನು ಪರಪ್ಪ ಕೋಳಿವಾಡ, ಶಿವಕುಮಾರಗೌಡ ಪಾಟೀಲ, ಲಿಂಗರಾಜ ಪಾಟೀಲ, ಪ್ರಕಾಶ ಉಳವಿ, ಮಾಹಾದೇವಪ್ಪ ಬಟ್ಟೂರ, ಸವಿತಾ ಸೋಮಣ್ಣವರ, ಎಸ್.ವೈ. ಕೋರಿ, ಡಾ. ಎಚ್.ಬಿ. ಹುಲಗಣ್ಣವರ, ಲಿಂಗಯ್ಯ ಗೌರಿ, ಎಸ್.ಎಸ್. ಹೊಸಮಠ, ಎಂ.ಜಿ. ಮೇಟಿ, ಡಾ. ಎಚ್.ವಾಯ್. ಹೊನ್ನಿನಾಯ್ಕರ್, ಪ್ರಸನ್ನ ಪಟ್ಟೆದ, ಇಮಾಮಸಾಬ ಕಿಲ್ಲೇದಾರ, ಮಲ್ಲಪ್ಪ ಬಂದಕನವರ, ಸಿದ್ದಪ್ಪ ಜೊಂಡಿ, ಬಾಪುಸಾಬ ಕಿಲ್ಲೇದಾರ ಇದ್ದರು.
ಕಣವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ನಶಿಸುತ್ತಿರುವ ಕೃಷಿ ಚಟುವಟಿಕೆಗಳಿಗೆ ಕಾರಣ ಜಾನುವಾರುಗಳ ಕೊರತೆಯಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಪ್ರತಿಯೊಬ್ಬರೂ ಕೃಷಿಯೊಂದಿಗೆ ಜಾನುವಾರು ಸಾಕಾಣಿಕೆಯಿಂದ



