ಮಕ್ಕಳಿಗೆ ಸೃಜನಶೀಲತೆ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯಲ್ಲಿ ಪಿ.ಕೆ. ಇನೋವೆಟಿವ್ ಸಮ್ಮರ್ ಕ್ಯಾಂಪ್ ವತಿಯಿಂದ ಬೇಸಿಗೆ ರಜಾ ದಿನದಲ್ಲಿ ಮಕ್ಕಳಿಗೆ ಸೃಜನಶೀಲತೆ ಕಾರ್ಯಕ್ರಮಕ್ಕೆ ಬುಧವಾರ ಸಿಸಿಎನ್ ವಿದ್ಯಾಪ್ರಸಾರ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾಂಪ್‌ನ ಅಧ್ಯಕ್ಷ ಪ್ರವೀಣಕುಮಾರ ಹಡಪದ, ಪ್ರಸ್ತುತ ಶಾಲೆಗಳಿಗೆ ರಜೆ ಇರುವುದರಿಂದ ಇಂತಹ ಸಂದರ್ಭದಲ್ಲಿ ಮಕ್ಕಳ ಬೆಳವಣಿಗೆಗೆ ಗತ್ಯವಿರುವ ಸೃಜನಶೀಲತೆ, ನಿರೂಪಣೆ, ರಂಗನಾಟಕ, ಚಿತ್ರಕಲೆ ಮತ್ತು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂತಹ ಕಾರ್ಯಕ್ರಮಗಳನ್ನು ನುರಿತ ತಜ್ಞರಿಂದ ನೀಡಲು ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿರಹಟ್ಟಿ-ಮುಂಡರಗಿ-ಲಕ್ಷ್ಮೇಶ್ವರ ತಾಲೂಕಾ ಕೇಂದ್ರಗಳಲ್ಲಿಯೂ ಸಹ ಶಿಬಿರ ಆಯೋಜಿಸಿದ್ದು, ಪೋಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಚಂದ್ರಕಾಂತ ನೂರಶೆಟ್ಟರ, ಶಿಕ್ಷಕಿ ವಿಜಯಲಕ್ಷ್ಮೀ ಮಾಲಸೂರೆ, ಕೆ.ಎ. ಬಳಿಗಾರ, ಅಶೋಕ ರಾಟಿಮನಿ, ಅನಸೂಯಾ ಡಂಬಳ, ರಾಜೇಶ್ವರಿ ಹಡಪದ, ಮಂಜುನಾಥ, ಅಂಜನಾ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here