ತುಮಕೂರು:- ಜಿಲ್ಲೆಯ ಗುಬ್ಬಿ ತಾಲೂಕಿನ ಹಿಂಡಸಗೆರೆ ಗ್ರಾಮದ ತೋಟದ ಮನೆಯಲ್ಲಿ ಮಹಿಳೆಯ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜರುಗಿದೆ.
Advertisement
ಗಂಡನ ಸಾವಿನ ನಂತರ ಮಂಜುಳಾ ಮಗನ ಜೊತೆ ತೋಟದ ಮನೆಯಲ್ಲಿ ವಾಸವಿದ್ದಳು. ಆದ್ರೆ, ಮಗ ಪತ್ನಿ ಮನೆಗೆ ಹೋಗಿದ್ದಾಗ ದುಷ್ಕರ್ಮಿಗಳು, ತೋಟದ ಮನೆಯೊಳಗೆ ನುಗ್ಗಿ ಒಂಟಿಯಾಗಿದ್ದ ಮಂಜುಳಾನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಮಗ ಸೊಸೆ ಇಲ್ಲದನ್ನು ನೋಡಿಯೇ ನವೆಂಬರ್ 30 ರಂದು ಮನೆಗೆ ನುಗ್ಗಿ ಹತ್ಯೆ ಮಾಡಲಾಗಿದ್ದು, ಡಿಸೆಂಬರ್ 01ರ ಬೆಳಗ್ಗೆ ಮೈದುನ ತೋಟದ ಮನೆ ಬಳಿ ತೆರಳಿದಾಗ ಮಂಜುಳಾ ಕೊಲೆಯಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ .ಎಸ್.ಪುರ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.


