ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯ ರೈತರಿಗೆ ಕಳೆದ ವರ್ಷ ತುಂಬಿದ ಬೆಳೆವಿಮಾ ಹಣ ಇದುವರೆಗೂ ಸಂದಾಯವಾಗಿಲ್ಲ. 7 ದಿನದ ಒಳಗೆ ಜಿಲ್ಲೆಯ ಎಲ್ಲ ರೈತರ ಖಾತೆಗೆ ಬೆಳೆ ಪರಿಹಾರದ ಮತ್ತು ವಿಮಾ ಪರಿಹಾರದ ಹಣ ಜಮಾ ಮಾಡಬೇಕು ಎಂದು ರೈತ ಹಿತಾಭಿವೃದ್ಧಿ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಹಿತಾಭಿವೃದ್ಧಿ ಸಂಘದ ಗದಗ ಜಿಲ್ಲಾಧ್ಯಕ್ಷ ಕರಬಸಯ್ಯ ನಾಲ್ವತ್ವಾಡಮಠ ಮಾತನಾಡಿ, ಪಕ್ಕದ ಧಾರವಾಡ, ಹಾವೇರಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಯ ರೈತರಿಗೆ ಬೆಳೆ ವಿಮಾ ಪರಿಹಾರದ ಹಣವು ಜಮೆ ಆಗಿ ತಿಂಗಳಾದರೂ ನಮ್ಮ ಜಿಲ್ಲೆಯ ರೈತರಿಗೆ ಹಣ ಜಮಾ ಆಗಿಲ್ಲ. ಕಾರಣ ಕೇಳಿದರೆ ಎಫ್ಐಡಿ ಆಗಿಲ್ಲ, ಆಧಾರ್ ಕಾರ್ಡ್ ಸರಿಯಿಲ್ಲ ಎಂದು ಸುಳ್ಳು ಸಬೂಬು ಹೇಳುತ್ತಿದ್ದು, ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ರೈತ ಹಿತಾಭಿವೃದ್ಧಿ ಸಂಘದ ಕಾರ್ಯದರ್ಶಿ ಪರಮೇಶ್ವರಪ್ಪ ಜಂತ್ಲಿ, ರೈತ ಮುಖಂಡರಾದ ಬಸವರಾಜ ಕವಳಿಕಾಯಿ, ವಿ.ಎಚ್. ದೇಸಾಯಿಗೌಡ್ರ, ಬಸಪ್ಪ ಕಲಬಂಡಿ, ವಿರೂಪಾಕ್ಷಪ್ಪ ಅಕ್ಕಿ, ಈಶ್ವರಪ್ಪ ಗುಜಮಾಗಡಿ, ಮೋಹನ ಇಮರಾಪೂರ, ಮಲ್ಲಪ್ಪ ಬಳ್ಳಾರಿ, ಬಸವರಾಜ ಹುಬ್ಬಳ್ಳಿ, ನರಸಪ್ಪ ತುಕ್ಕಪ್ಪನವರ, ವಿರುಪಾಕ್ಷಪ್ಪ ಹೆಬ್ಬಳ್ಳಿ, ಕಳಕಪ್ಪ ರೇವಡಿ, ಪರಪ್ಪ ಕಮತರ, ಫಕ್ಕಿರಗೌಡ ಪಾಟೀಲ, ಮಂಜುನಾಥ ಕೋಳಿವಾಡ, ಸತೀಶ ಗಿಡ್ಡಹನಮಣ್ಣವರ, ಮುತ್ತಪ್ಪ ಜಡಿ, ಉಮೇಶ ಲಿಂಗರಡ್ಡಿ, ಬಸವರಾಜ ಮೊರಬದ, ಇಮಾಮ ಹುಸೇನ್ ಚಿನ್ನೂರ, ರುದ್ರಯ್ಯ ಹಿರೇಮಠ, ಈರಣ್ಣ ಗಡಗಿ, ವಿರುಪಾಕ್ಷಪ್ಪ ಕಳಸದ, ಮಂಜುನಾಥ ಹಿತ್ತಲಮನಿ, ಅಶೋಕ ಪೋರ್ಬಿ, ಮಂಜುನಾಥ ಕುಡಗಿ ಸೇರಿದಂತೆ ಇತರರಿದ್ದರು.