ವಿಜಯಸಾಕ್ಷಿ ಸುದ್ದಿ, ಗದಗ: ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಸುದೀರ್ಘ ೧೧೯ ವರ್ಷಗಳ ಇತಿಹಾಸ ಹೊಂದಿದೆ. ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೇ ಮಹಾರಾಷ್ಟç, ಗೋವಾದಲ್ಲಿಯೂ ಶಾಖೆಗಳನ್ನು ತೆರೆಯುವ ಮೂಲಕ ರಾಷ್ಟ್ರಮಟ್ಟದ ಬ್ಯಾಂಕ್ ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದು ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ಹೇಳಿದರು.
ಇಲ್ಲಿನ ಎಪಿಎಂಸಿ ರಸ್ತೆಯ ಮಾನ್ವಿ ಬಿಲ್ಡಿಂಗ್ನಲ್ಲಿ ಗುರುವಾರ ನಡೆದ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ 20ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಗಣ್ಯ ಉದ್ಯಮಿ ಪ್ರಕಾಶ ಭೂಮಾ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿಯಾದ ಬಸವೇಶ್ವರ ಖಾನಾವಳಿ ಮಾಲೀಕರು ಆದಿಯಾಗಿ ಅನೇಕರು ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ ಸಾಲ ಪಡೆದು ವ್ಯವಹಾರವನ್ನು ವಿಸ್ತರಿಸಿ ಅಭಿವೃದ್ಧಿ ಹೊಂದಿದ್ದಾರೆ. ರಾಷ್ಟ್ರೀಯ ಬ್ಯಾಂಕಿಗಿಂತ ಹೆಚ್ಚು ಅನುಕೂಲ ಕಲ್ಪಿಸುತ್ತಿರುವ ಈ ಬ್ಯಾಂಕ್, ಗದಗ ಪರಿಸರದಲ್ಲಿಯೂ ಉತ್ತಮ ಸೇವೆ ನೀಡುವ ವಿಶ್ವಾಸವಿದೆ ಎಂದರು.
ಗಣ್ಯ ಉದ್ಯಮಿ ಕಿರಣ ಭೂಮಾ ಮಾತನಾಡಿ, ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಕರ್ನಾಟಕದ ಅಗ್ರ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿದೆ. ದೇಶದ ತುಂಬೆಲ್ಲಾ ಇದರ ಶಾಖೆಗಳು ಆರಂಭವಾಗಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾರುದ್ರಪ್ಪ ಭೂಸ್ತ, ಕುಮಾರ ಮಾನ್ವಿ ಶುಭ ಕೋರಿದರು. ಈ ಸಂದರ್ಭದಲ್ಲಿ ಸಂತೋಷ ಪಂಡಿತ, ನಿತಿನ್ ಕಾಸರಕೋಡ, ಮಿಲಿಂದ ಪಂಡಿತ, ಮೋಹನ ಪ್ರಭು, ಸದಾನಂದ ನಾಯ್ಕ, ಟಿ.ಎಸ್. ಬಾಲಮಣಿ, ರಾಮಕೃಷ್ಣ ಪಾಲೇಕರ, ಸುವರ್ಣಾ ಪ್ರಭು, ಸುರೇಂದ್ರ ರೇವಣಕರ, ವರೀಂದ್ರ ಕಾಮತ, ಪ್ರಕಾಶ ಪೈ, ಸೂರ್ಯಕಾಂತ ದೇವಳಿ, ಕೆ.ಎನ್. ಹೊಸಮನಿ, ಸಂತೋಷ ಉಡ್ಲಿಕರ್, ವಂದನಾ ಕಾಮತ, ರಾಜೇಶ ಧಾಕಪ್ಪ, ಬ್ರುನೋ ಮಸ್ಕರೆನಸ್, ಟಿ. ಶ್ರೀಧರಮೂರ್ತಿ, ಸುಬ್ರಾವ್ ಗಾಯತೊಂಡೆ, ಕೆ.ಎಸ್. ಶ್ರೀನಿವಾಸ, ಸತೀಶ ಬಾಡಗಾಂವಕರ್, ರಾಮಚಂದ್ರ ಕಿಣಿ ಮುಂತಾದವರು ಉಪಸ್ಥಿತರಿದ್ದರು.