ಹಾವೇರಿ: ಸಿಲಿಂಡರ್ ಸ್ಫೋಟಗೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ- ಬೆಳ್ಳಿ ಹಾಗೂ ಬಟ್ಟೆ ಬೆಂಕಿಗಾಹುತಿಯಾಗಿರುವ ಘಟನೆ ಹೊಸೂರಿನ ಎತ್ತಿನಹಳ್ಳಿ ಪ್ಲಾಟ್ ನಲ್ಲಿ ಬೆಳಗಿನ ಜಾವದಲ್ಲಿ ನಡೆದಿದೆ.
Advertisement
ಕೂಲಿ ಕಾರ್ಮಿಕ ಇಮಾಮ್ ಹುಸೇನ್ ಹಾಗೂ ತಂದೆ ಮಾಬೂಸಾಬ್ ಬಾಡದ ವಾಸಿಸುವ ಬಾಡಿಗೆ ಮನೆಗೆ ಬೆಂಕಿ ತಗುಲಿದ್ದು,ಮಗನ ಮದುವೆಗೆ ಇನ್ನೊಂದು ವಾರ ಬಾಕಿ ಇರುವಾಗಲೇ ಮನೆ ಹೊತ್ತಿ ಉರಿದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಆದ್ದರಿಂದ ಭಾರೀ ಅನಾಹುತ ಸಂಭವಿಸುವುದು ತಪ್ಪಿದೆ.
ಮಗನ ಮದುವೆಗೆ ಸಂಘ-ಸಂಸ್ಥೆಗಳಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಸಾಲ ಪಡೆದಿದ್ದರು. ಇದೀಗ ಈ ಬೆಂಕಿ ಅವಘಡದಿಂದ ಕುಟುಂಬ ವರ್ಗ ಕಂಗಾಲಾಗಿದೆ. ಹೀಗಾಗಿ ಸಂತ್ರಸ್ತ ಕುಟುಂಬವು ಪರಿಹಾರಕ್ಕಾಗಿ ಶಾಸಕ ಯಾಸಿರ್ ಖಾನ್ ಪಠಾಣಗೆ ಮನವಿ ಮಾಡಿದ್ದಾರೆ.