ದರ್ಶನ್ ಗೆ ಜೈಲಲ್ಲಿ ಸಿಗುತ್ತಿರುವ ಐಷಾರಾಮಿ ಜೀವನ ನೋಡಿ ನೋವಾಗಿದೆ: ರೇಣುಕಾಸ್ವಾಮಿ ತಂದೆ ಕಣ್ಣೀರು!

0
Spread the love

ಬೆಂಗಳೂರು:- ದರ್ಶನ್ ಗೆ ಜೈಲಲ್ಲಿ ಸಿಗುತ್ತಿರುವ ಐಷಾರಾಮಿ ಜೀವನ ನೋಡಿ ನೋವಾಗಿದೆ ಎಂದು ರೇಣುಕಾಸ್ವಾಮಿ ತಂದೆ ಕಣ್ಣೀರು ಹಾಕಿದ್ದಾರೆ.

Advertisement

ಜೈಲಿನಲ್ಲಿ ಸಹ ಕೈದಿಯ ಮೊಬೈಲ್‌ನಲ್ಲಿ ನಟ ದರ್ಶನ್ ವಿಡಿಯೋ ಕಾಲ್​ ವೈರಲ್​ ಆಗಿರುವ ವಿಚಾರವಾಗಿ ಮಾತನಾಡಿ, ಹೀಗಾದರೆ ಪ್ರಕರಣ ಸಿಬಿಐಗೆ ವಹಿಸಿಬೇಕೆಂದು ಅನಿಸುತ್ತಿದೆ. ದರ್ಶನ್​ ಜೈಲಿನಲ್ಲಿದ್ದಾರೋ ಇಲ್ವೊ ಎಂಬ ಭಾವನೆ ಬರ್ತಿದೆ.

ದರ್ಶನ್​ ಸಹ ಸಾಮಾನ್ಯ ಕೈದಿಯಂತೆಯೇ ಇರಬೇಕು. ಆದರೆ ರೆಸಾರ್ಟ್​ನಲ್ಲಿರುವಂತೆ ಕಂಡು ಶಾಕ್​ ಆಯ್ತು. ದರ್ಶನ್​ಗೆ ಸಿಗರೇಟ್​ ನೀಡಿದವರಿಗೆ ಶಿಕ್ಷೆ ಆಗಬೇಕು. ಮುಖ್ಯಮಂತ್ರಿ, ಗೃಹಸಚಿವರು ಈ ಬಗ್ಗೆ ಗಮನಹರಿಸಬೇಕು ಎಂದು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಆಗ್ರಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here