HomeEntertainmentದರ್ಶನ್ ಹೀಗೆ ಆಗಬಾರದಿತ್ತು: ಕಣ್ಣೀರು ಹಾಕಿದ ಹಿರಿಯ ನಟ ಹರೀಶ್‌ ರಾಯ್

ದರ್ಶನ್ ಹೀಗೆ ಆಗಬಾರದಿತ್ತು: ಕಣ್ಣೀರು ಹಾಕಿದ ಹಿರಿಯ ನಟ ಹರೀಶ್‌ ರಾಯ್

For Dai;y Updates Join Our whatsapp Group

Spread the love

ಕನ್ನಡ ಚಿತ್ರರಂಗದ ಹಿರಿಯ ನಟ ಹರೀಶ್‌ ರಾಯ್‌ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವ ಹರೀಶ್‌ ರಾಯ್‌ ಅವರಿಗೆ ಈಗಾಗಲೇ ಹಲವು ನಟರು ಸಹಾಯ ಹಸ್ತ ಚಾಚಿದ್ದಾರೆ. ಇದೀಗ ಹರೀಶ್‌ ರಾಯ್‌ ಮತ್ತೆ ಚಿತ್ರರಂಗದವರ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಈ ಹಿಂದೆ ಹರೀಶ್‌ ರಾಯ್‌ ಆರೋಗ್ಯ ಸಮಸ್ಯೆ ತಿಳಿದ ಯಶ್‌ ಸಹಾಯ ಮಾಡಿದ್ದರು. ಇದೀಗ ದರ್ಶನ್‌ ಅಭಿಮಾನಿಗಳು ಹರೀಶ್‌ ರಾಯ್‌ ಸಹಾಯಕ್ಕೆ ಮುಂದೆ ಬಂದಿದ್ದಾರೆ. ದರ್ಶನ್ ಜೈಲಿನಲ್ಲಿದ್ದರೂ ಅವರ ಅಭಿಮಾನಿಗಳು ಹರೀಶ್ ಅವರ ಸಹಾಯಕ್ಕೆ ಮುಂದಾಗಿದ್ದಾರಂತೆ. ಈ ಬಗ್ಗೆ ಸ್ವತಃ ಹರೀಶ್‌ ರಾಯ್‌ ಹೇಳಿದ್ದಾರೆ.

‘ದರ್ಶನ್ ಅಭಿಮಾನಿಗಳು ಫೋನ್ ಮಾಡುತ್ತಲೇ ಇರುತ್ತಾರೆ. ಅಣ್ಣ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದು ಧೈರ್ಯ ತುಂಬುತ್ತಾರೆ. ಆದರೆ ಆ ವ್ಯಕ್ತಿಗೆ (ದರ್ಶನ್) ಹೀಗೆ ಆಗಬಾರದಿತ್ತು. ನಾನೊಬ್ಬ ಸಣ್ಣ ನಟ. ಆ ವ್ಯಕ್ತಿ ದೊಡ್ಡ ಸ್ಟಾರ್ ಹೀರೋ, ಎಲ್ಲ ಸಕಲ ಸೌಕರ್ಯಗಳೂ ಇರುವ ನಟ. ಆ ವ್ಯಕ್ತಿಗೆ ಬಂದಿರುವ ಸ್ಥಿತಿ ಬಹಳ ಬೇಸರ. ಅವರು ಒಳ್ಳೆಯ ಮನುಷ್ಯ, ನಾಲ್ಕು ಜನರ ಕಷ್ಟ ಕೇಳಿ ಪರಿಹಾರ ಕೊಡುವ ಮನುಷ್ಯ’ ಎಂದು ಹರೀಶ್ ರಾಯ್ ಹೇಳಿದ್ದಾರೆ.

‘ಎಷ್ಟೋ ಸರಿ ನಾವು ಸಹ ಅವರ ಬಳಿ ಹೋಗುತ್ತೇವೆ. ಏನೋ ಸಮಸ್ಯೆ ಹೇಳಿಕೊಂಡು ಹೋದಾಗ ತಪ್ಪಿದ್ದವರನ್ನು ಕರೆದು ಬುದ್ಧಿವಾದ ಹೇಳುತ್ತಾರೆ. ಸಹಾಯ ಮಾಡುವ ಗುಣ ಅವರಲ್ಲಿದೆ. ಹಾಗೆಯೇ ಇದನ್ನೂ ಮಾಡಲು ಹೋಗಿದ್ದಾರೆ ಆದರೆ ಜಾಗರೂಕತೆ ನಡೆದು ಹೋಗಿದೆ. ಅದರಿಂದ ಈ ಸ್ಥಿತಿಗೆ ಅವರು ಹೋಗಿದ್ದಾರೆ. ನನಗೇ ಒಂದು ದಿನ ಒಂದು ರೂಮಿನಲ್ಲಿ ಕೂತಿರಲು ಆಗುವುದಿಲ್ಲ ಆದರೆ ಅವರು ಎಷ್ಟು ದಿನ ಆ ಕೋಣೆಯಲ್ಲಿ ಕಳೆಯಬೇಕು’ ಎಂದು ಕಣ್ಣೀರು ಹಾಕಿದ್ದಾರೆ.

‘ಅವರು ಒಳ್ಳೇದು ಮಾಡಿರೋದು ತುಂಬಾ ಇದೆ. ಹೌದು, ಈಗ ಒಂದು ಅಜಾಗರೂಕತೆ ನಡೆದಿದೆ. ಆದರೆ ಅವರು ಮಾಡಿರುವ ಒಳ್ಳೆಯದನ್ನು ಪರಿಗಣಿಸಿ ಆ ದೇವರು ಅವರಿಗೆ ಒಳ್ಳೆಯದು ಮಾಡಬೇಕು. ನನಗೇ ಸಾಕಷ್ಟು ಸಹಾಯವನ್ನು ಅವರು ಮಾಡಿದ್ದಾರೆ. ದೇವರು ಅವರನ್ನು ಕಾಪಾಡಲಿ. ಅವರಿಂದ ಊಟ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ನನಗೆ ಅವರೆಂದರೆ ಬಹಳ ಪ್ರೀತಿ, ದೇವರಲ್ಲಿ ನಾನು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ ಹರೀಶ್ ರಾಯ್.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!