ಬೆಳ್ಳಂ ಬೆಳಗ್ಗೆ ಬಳ್ಳಾರಿಯತ್ತ ದರ್ಶನ್: ರೂಟ್ ಮ್ಯಾಪ್ ಹೇಗಿದೆ ಗೊತ್ತಾ!?

0
Spread the love

ಬೆಂಗಳೂರು:- ಪರಪ್ಪನ ಅಗ್ರಹಾರದಲ್ಲಿ ಬಿಂದಾಸ್ ಲೈಫ್ ಶುರುಮಾಡಿದ್ದ ದರ್ಶನ್ ರನ್ನು CM ಸಿದ್ದರಾಮಯ್ಯ ಹಾಗೂ ಕೋರ್ಟ್ ಸೂಚನೆ ಮೇರೆಗೆ ಇಂದು ಬಳ್ಳಾರಿಗೆ ಕರೆದೊಯ್ಯಲಾಗುತ್ತಿದೆ.

Advertisement

ಇಂದು ಬೆಳಗ್ಗೆ 4.30ಕ್ಕೆ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ಕರೆದೊಯ್ದಿದ್ದಾರೆ. ಭದ್ರತಾ ದೃಷ್ಟಿಯಿಂದ ದರ್ಶನ್​ರನ್ನು ಬೆಳ್ಳಂ ಬೆಳಗ್ಗೆಯೇ ಬಳ್ಳಾರಿ ಜೈಲಿನತ್ತ ಕರೆದೊಯ್ಯಲಾಗ್ತಿದೆ. ಜೈಲು ಸಿಬ್ಬಂದಿ ಬಂದೋಬಸ್ತ್​ನಲ್ಲಿ ಮುಂಜಾನೆ 4.30ಕ್ಕೆ ಕರೆದೊಯ್ದಿದ್ದಾರೆ.

ದರ್ಶನ್​ರನ್ನ ಕರ್ಕೊಂಡು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಟು ಹೊಸೂರು ಮುಖ್ಯರಸ್ತೆಗೆ ಬಳಿಕ ಹೊಸೂರು ಮುಖ್ಯ ರಸ್ತೆಯಿಂದ ನೈಸ್ ರಸ್ತೆಗೆ ಎಂಟ್ರಿಯಾಗಿ.. ನೈಸ್ ರಸ್ತೆ ಮೂಲಕ ತುಮಕೂರು ರಸ್ತೆ.. ನೆಲಮಂಗಲ ಮೂಲಕ ತುಮಕೂರು, ಶಿರಾ ತಲುಪಿ.. ಶಿರಾದಿಂದ ಹಿರಿಯೂರು.. ಬಳಿಕ ಚಳ್ಳಕೆರೆಗೆ ಎಂಟ್ರಿಯಾಗ್ತಾರೆ.. ಚಳ್ಳಕೆರೆ ಮಾರ್ಗವಾಗಿ ಹಾನಗಲ್ಲು ಹಲಕುಂದಿ ಮಾರ್ಗವಾಗಿ ಬಳ್ಳಾರಿ ಜೈಲಿಗೆ ನಟ ದರ್ಶನ್​ನನ್ನು ಸ್ಥಳಾಂತರ ಮಾಡಲಿದ್ದಾರೆ ಎನ್ನಲಾಗಿತ್ತು.

ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ.. ಭದ್ರತಾ ದೃಷ್ಟಿಯಿಂದ ದರ್ಶನ್ ಇದ್ದ ವಾಹನವನ್ನು ಡೈವರ್ಟ್ ಮಾಡಿದ್ದಾರೆ. ಪರಪ್ಪನ ಅಗ್ರಹಾರ-ಸಿಲ್ಕ್ ಬೋರ್ಡ್-ಮೇಖ್ರಿ ಸರ್ಕಲ್-ಹೆಬ್ಬಾಳ-ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ- ಬಾಗೇಪಲ್ಲಿ-ಪೆನಗೊಂಡ,ಅನಂತಪುರ- ಮಾರ್ಗವಾಗಿ ಬಳ್ಳಾರಿಗೆ ದರ್ಶನ್​ರನ್ನು ಕರೆದುಕೊಂಡು ಹೋಗುತ್ತಿರುವ ಸಾಧ್ಯತೆ ಇದೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here