ವಿಜಯಸಾಕ್ಷಿ ಸುದ್ದಿ, ಗದಗ : ಹಿರಿಯ ರಂಗಕರ್ಮಿ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಅವರ ಭಕ್ತಿರಸ ಉಕ್ಕಿಸುವ ಸಂಭಾಷಣೆ,ಗಟ್ಟಿ ನಿದರ್ಶನ ಮತ್ತು ಇಂಪಾದ ಹಾಡುಗಳೊಂದಿಗೆ ಪ್ರಯೋಗಗೊಂಡು ಜನಮನ ಸೂರೆಗೊಂಡ ಗದಗ ಕಲಾವಿದರ `ದಶರಥ ನಂದನ ಶ್ರೀರಾಮ’ ನಾಟಕ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಶ್ರೀ ಶಂಕರಾಚಾರ್ಯ ಸೇವಾ ಸಮೀತಿಯವರ ಆಶ್ರಯದಲ್ಲಿ ಪ್ರಯೋಗಗೊಳ್ಳಲಿದೆ.
ಆದಿಗುರು ಶಂಕರಾಚಾರ್ಯರ ಉತ್ಸವದ ಅಂಗವಾಗಿ ಮೇ 18ರ ಸಂಜೆ 6 ಗಂಟೆಗೆ ಪ್ರಯೋಗಗೊಳ್ಳುವ ಈ ನಾಟಕ(ಸಂಗೀತ ರೂಪಕ)ದಲ್ಲಿ ರಂಗಕಲಾವಿದರಾದ ಮೌನೇಶ್ ಸಿ. ಬಡಿಗೇರ್(ನರೇಗಲ್ಲ)-ಶ್ರೀರಾಮನಾಗಿ, ಲಕ್ಷ್ಮಣ-ಉಜ್ವಲ್ ಕಬಾಡಿ, ಭರತ-ಶ್ವೇತಾ ಸುರೇಬಾನ, ಸೀತೆ- ಕೀರ್ತಿ ಗುಮಾಸ್ತೆ, ದಶರಥ-ಅಂದಾನಪ್ಪ ವಿಭೂತಿ, ವಿಶ್ವಾಮಿತ್ರ-ಮುರಲೀಧರ ಸಂಕನೂರ, ಕೈಕೇಯಿ- ಅನ್ವಿತಾ ಹುಯಿಲಗೋಳ, ಮಂಥರೆ-ರಕ್ಷಿತಾ ಕುಲಕರ್ಣಿ, ಅಹಲ್ಯೆ-ರಂಜಿತಾ ಕುಲಕರ್ಣಿ, ಶೂರ್ಪನಖಿ- ಅನಘಾ ಕುಲಕರ್ಣಿ, ರಾವಣ-ವಿಶ್ವನಾಥ್ ಬೇಂದ್ರೆ, ಶಬರಿ-ಸುರಭಿ ಮಹಾಶಬ್ದಿ, ವೇದವತಿ-ರಂಜಿತಾ ಕುಲಕರ್ಣಿ, ಅಗ್ನಿದೇವ-ಶ್ವೇತಾ ಸುರೇಬಾನ, ವಿಭೀಷಣ-ಅಮರೇಶ ರಾಮ್ ಪುರ, ಮಾರೀಚ-ಅನನ್ಯ ದೇಶಪಾಂಡೆ, ಬಾಲರಾಮ-ದೇವಾಂಸ್, ಬಾಲ ಲಕ್ಷ್ಮಣ-ಪ್ರಭು ಗೌಡ, ಲವ ಕುಶ- ಆರಾಧ್ಯ, ಅನನ್ಯಾ, ಹನುಮಂತ-ಅವನಿ ಕುಲಕರ್ಣಿ ಅಭಿನಯಿಸಲಿದ್ದಾರೆ. ರಂಗಾಸಕ್ತರು ವೀಕ್ಷಿಸಲು ಶಂಕರಾಚಾರ್ಯ ಸೇವಾ ಸಮೀತಿಯವರು ವಿನಂತಿಸಿದ್ದಾರೆ.