ಮಹಾ ಕುಂಭಮೇಳಕ್ಕೆ ಕುಟುಂಬ ಸಮೇತರಾಗಿ ತೆರಳಿದ DCM ಡಿಕೆಶಿ!

0
Spread the love

ಬೆಂಗಳೂರು:- ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ವೀಕ್ಷಿಸಲು DCM ಡಿಕೆ ಶಿವಕುಮಾರ್ ಅವರು ಇಂದು ಕುಟುಂಬ ಸಮೇತ ಬೆಂಗಳೂರಿನಿಂದ ತೆರಳಿದ್ದಾರೆ.

Advertisement

ಮುಂಜಾನೆ 5:30ಕ್ಕೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಕುಟುಂಬದೊಂದಿಗೆ ಡಿಕೆಶಿ ತೆರಳಿದ್ದಾರೆ. ಕುಂಭಮೇಳಕ್ಕೆ ಹೋಗುವ ಮುನ್ನ ತಮ್ಮ ಬೆಂಗಳೂರಿನ ನಿವಾಸದ ಬಳಿ ಮಾತನಾಡಿ, ನಮ್ಮ ಧರ್ಮದ ನಂಬಿಕೆಯಿಂದ ಇವತ್ತು ಕುಂಭಮೇಳಕ್ಕೆ ಹೋಗುತ್ತಿದ್ದೇನೆ ಎಂದರು.

ಕರ್ನಾಟಕದಲ್ಲಿ ಡಿಸಿ, ಎಸ್ಪಿ ಸೇರಿ ಮೈಸೂರಿನವರು ಬಂದಿದ್ದರು. ಅಲ್ಲಿನ ಕುಂಭಮೇಳಕ್ಕೂ ಹೋಗುತ್ತೇನೆ. ಸ್ವಾಮಿಗಳು ಎಲ್ಲಾ ಮಾತನಾಡಿದ್ದೇವೆ. ಅವರು ಎಲ್ಲಾ ಬರುತ್ತಿದ್ದಾರೆ. ಅಲ್ಲಿಯೂ ಭಾಗವಹಿಸುತ್ತೇವೆ. ನಮ್ಮ ಕರ್ನಾಟದ ಕಾವೇರಿ ಕುಂಭಮೇಳದಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದರು.

ಇದಾದ ನಂತರ ಸೋಮವಾರ ಏರ್ ಶೋನಲ್ಲಿ ಸಿಎಂ, ನಾನು ಭಾಗಿಯಾಗುತ್ತಿದ್ದೇವೆ. ಗೋಬಲ್ ಇನ್ಸ್ವೆಸ್ಟರ್ ಸಭೆ ಇದೆ, ಅದರಲ್ಲೂ ಭಾಗಿಯಾಗುತ್ತಿದ್ದೇನೆ. ನಾಲ್ಕೈದು ದಿನ ಅಭಿವೃದ್ಧಿ ಕೆಲಸ ಇದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here