ದೇವಾಂಗ ಸಮಾಜದಿಂದ ಮಂತ್ರಾಲಯ ಶಾಖಾಮಠಕ್ಕೆ `ದೊಡ್ಡ ಘಂಟೆ’ ಸಮರ್ಪಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ಕಳಸಾಪೂರ ಗ್ರಾಮದಲ್ಲಿ ನಿರ್ಮಾಣವಾಗಿರುವ ಮಂತ್ರಾಲಯ ರಾಘವೇಂದ್ರ ಮಠದ ಶಾಖಾ ಮಠದ ಪ್ರಾಣ-ಪ್ರತಿಷ್ಠೆ ಮೇ 30, 31ರಂದು ನಡೆಯಲಿರುವ ಹಿನ್ನೆಲೆಯಲ್ಲಿ ದೇವಾಂಗ ಸಮಾಜದಿಂದ ಶ್ರೀ ಹಳೆ-ಬನಶಂಕರಿ ದೇವಸ್ಥಾನದಲ್ಲಿ `ದೊಡ್ಡ ಘಂಟೆ’ಗೆ ಪೂಜೆ ಸಲ್ಲಿಸಿ, ಸಮರ್ಪಣೆ ಮಾಡಲಾಯಿತು.

Advertisement

ಶುಕ್ರವಾರ ಶ್ರೀ ಹಳೆ-ಬನಶಂಕರಿ ದೇವಸ್ಥಾನದಲ್ಲಿ ಪಾಲಕಿ ಮಹೋತ್ಸವದ ನಂತರ ನಡೆದ ಸಮರ್ಪಣಾ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷರಾದ ದಶರಥರಾಜ ಕೊಳ್ಳಿಯವರು ಸರ್ವರನ್ನು ಸ್ವಾಗತಿಸಿದರು.

ಮಂತ್ರಾಲಯ ರಾಘವೇಂದ್ರ ಮಠದ ಸೇವೆಯಲ್ಲಿ ಸಂತೃಪ್ತರಾಗಿರುವ ಶ್ರೀಗಳ ಆದೇಶದಂತೆ ಅಪಮೃತ್ಯು ಪವಾಡ ಕ್ಷೇತ್ರದ ಕಿರಿಟಗೇರಿ ಗ್ರಾಮಸ್ಥರ ಭೂ-ದಾನಿಗಳ ಸಹಕಾರದೊಂದಿಗೆ ಶ್ರೀಗಳ ಅಮೋಘ ಸಂಕಲ್ಪದಂತೆ ಮುಂದಿನ ದಿನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ನಡೆದಾಡಿದ ಪುಣ್ಯಕ್ಷೇತ್ರ ಹಾಗೂ ಪವಾಡ ಮಾಡಿದ ಕ್ಷೇತ್ರ ಅಭಿವೃದ್ಧಿಯಾಗಲಿದೆ ಎಂದು ಮಂತ್ರಾಲಯದ ವಿಶೇಷ ಪ್ರತಿನಿಧಿ ಶ್ರೀನಿವಾಸ ಹುಬ್ಬಳ್ಳಿಯವರು ಸಂತಸ ವ್ಯಕ್ತಪಡಿಸಿದರು.

ಶ್ರೀರಾಘವೇಂದ್ರ ಪಾದಯಾತ್ರೆ ಕಮಿಟಿ ಅಧ್ಯಕ್ಷ ರಾಘವೇಂದ್ರ ಕಾಲವಾಡವರು ಶಾಖಾ ಮಠದ ಪರವಾಗಿ ದೊಡ್ಡ ಘಂಟೆಯನ್ನು ಸಾಂಕೇತಿಕವಾಗಿ ಸ್ವೀಕಾರ ಮಾಡಿದರು.

ಈ ಸಂದರ್ಭದಲ್ಲಿ ದಂಪತಿಗಳಾದ ಶ್ರೀನಿವಾಸ ಹುಬ್ಬಳ್ಳಿ-ಲಕ್ಷ್ಮೀ ಹುಬ್ಬಳ್ಳಿ ಹಾಗೂ ಮಕ್ಕಳು, ರಾಮಚಂದ್ರ ಹುಬ್ಬಳ್ಳಿ, ಮೇಘಾ ಹುಬ್ಬಳ್ಳಿ ಹಾಗೂ ಅಪಮೃತ್ಯು ಪವಾಡ ಕ್ಷೇತ್ರ ಕಿರಟಗೇರಿ ಗ್ರಾಮದ ಪರವಾಗಿ ಕಲ್ಮೇಶ್ವರಯ್ಯ ಹಿರೇಮಠ, ಚನ್ನಯ್ಯ ಹಿರೇಮಠ, ನವೀನ ಮೇಡಿ, ರಾಜು ಕೋಚಿ, ಬಸವರಾಜ ಮುದಗಲ್, ಲಕ್ಷ್ಮಣ ನೀಲಗುಂದ, ಮೋಹನ ಶಾಗವಿ, ರಮೇಶ ಮೇಡಿ, ಚಿದಾನಂದ ಬಣ್ಣದಬಾವಿ, ಈರಣ್ಣ ಹುಳ್ಳಿ, ಹರ್ತಿ ಮುಂತಾದವರು ಉಪಸ್ಥಿತರಿದ್ದರು.

ದೇವಾಂಗ ಸಮಾಜದ ನೌಕರ ಸಂಘದ ಅಧ್ಯಕ್ಷ ರಾಘವೇಂದ್ರ ಕೊಪ್ಪಳ ಮಾತನಾಡಿ, ಧಾರ್ಮಿಕ, ಮಠ-ದೇವಸ್ಥಾನಗಳು ನಿರ್ಮಾಣವಾಗುವಾಗ ಎಲ್ಲರ ಸಹಕಾರ ಅಗತ್ಯವಾಗಿದೆ. ಇದರಿಂದ ಸನಾತನ ಹಿಂದೂ ಧರ್ಮ ಶಕ್ತಿಶಾಲಿಯಾಗುತ್ತದೆ. ಸಮಾಜದವರಾದ ಶ್ರೀನಿವಾಸ ಹುಬ್ಬಳ್ಳಿ ಅವರು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಭಕ್ತರಾಗಿದ್ದು, ಶಾಖಾಮಠಕ್ಕೆ ದೊಡ್ಡ ಘಂಟೆಯನ್ನು ಎಲ್ಲರ ಸಹಕಾರದಿಂದ ಸಮರ್ಪಣೆ ಮಾಡಿದ್ದು ವಿಶೇಷವಾಗಿದೆ. ಘಂಟೆ ಸಮರ್ಪಣೆಯಿಂದ ಅವರ ಮುಂದಿನ ಪೀಳಿಗೆ ಮೂಕತನ ಹಾಗೂ ಕಿವುಡುತನದಿಂದ ಮುಕ್ತರಾಗುತ್ತಾರೆ. ಇದು ಜ್ಞಾನಿಗಳು ಹೇಳುವ ಮಾತು ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here