ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ರಾಜಾಜಿನಗರ ಇ ಎಸ್ ಐ ಆಸ್ಪತ್ರೆಯ ಕರ್ಮಕಾಂಡ ಬೆಳಕಿಗೆ ಬಂದಿದೆ. ಡೆಲಿವರಿ ಮಾಡಿಸುವಲ್ಲಿ ವೈದ್ಯರು ವಿಳಂಬ ಮಾಡಿದ ಹಿನ್ನೆಲೆ ನವಜಾತ ಶಿಶು ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ.
ಸಾವನ್ನಪ್ಪಿರುವ ಮಗುವನ್ನು ಸಂಗೀತಂ ಜೋಸ್ತ್ನಾ ಹಾಗೂ ಸುನೀಲ್ ದಂಪತಿ ಮಗು ಎಂದು ಗುರುತಿಸಲಾಗಿದೆ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಪತಿ ಸುನಿಲ್ ಅವರು ಪತ್ನಿ ಸಂಗೀತಂ ಜೋಸ್ತ್ನಾಳನ್ನ ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಇ ಎಸ್ ಐ ಗೆ ಕರೆತಂದಿದ್ದಾರೆ. ಅದರಂತೆ ಸೋಮವಾರ ಹೆರಿಗೆ ನೋವು ಕಂಡುಬಂದ್ರೂ ವೈದ್ಯರು ಹೆರಿಗೆ ಮಾಡಿಸಿಲ್ಲ. ಡೆಲಿವರಿ ನೋವು ಬಂದು ವಿಪರೀತ ವಾಟರ್ ಡಿಸ್ಚಾರ್ಜ್ ಆಗಿದೆ. ಡೆಲಿವರಿ ಮಾಡಿಸಿ ಅಂತಾ ಹೇಳಿದ್ರು ಡೆಲಿವರಿ ಮಾಡಿಸಿಲ್ಲ.
ಮಂಗಳವಾರ ಬೆಳಗ್ಗೆ ಸಿಸೇರಿಯನ್ ಡೆಲಿವರಿ ಮಾಡಿದ್ದಾರೆ. ಮಗು ಸ್ಯಾನಿಟರಿ ನೀರು ಕುಡಿದಿದೆ ಅಂತಾ ಐಸಿಯುನಲ್ಲಿ ಇಟ್ಟಿದ್ದಾರೆ. ಇವತ್ತು ಮಗು ಡೆತ್ ಆಗಿದ್ದು, ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ. ಇಎಸ್ ಐ ಆಸ್ಪತ್ರೆ ಡೆಲಿವರಿ ವಾರ್ಡ್ ಮುಂದೆ ಸಂಬಂಧಿಕರು ಜಮಾಯಿಸಿದ್ದಾರೆ. ಎರಡು ದಿನ ಆದಮೇಲೆ ಯಾರಾದ್ರು ಆಪರೇಷನ್ ಮಾಡ್ತಾರಾ..? ಡಾಕ್ಟರ್ ಕರೆಸಿ ಅಂತಾ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ಸ್ಥಳಕ್ಕೆ ರಾಜಾಜಿನಗರ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.