ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಪಟ್ಟಣದ ಭರಮದೇವರ ಸರ್ಕಲ್ ಹತ್ತಿರದ ಉರ್ದು ಶಾಲೆ ಪಕ್ಕದಲ್ಲಿರುವ ಪುರಸಭೆ ಆಸ್ತಿ ಸಂಖ್ಯೆ 21-1ಎ ನೇದ್ದರಲ್ಲಿ 6 ಮಳಿಗೆಗಳ ಕಟ್ಟಡವನ್ನು ಪುರಸಭೆಯಿಂದ ಯಾವುದೇ ಪರವಾನಿಗೆ ಇಲ್ಲದೇ ನಿರ್ಮಿಸಲಾಗಿದೆ. ಕೂಡಲೇ ಅದನ್ನು ತೆರವುಗೊಳಿಸಿ ಇದೇ ಜಾಗೆಯಲ್ಲಿ ಗ್ರಂಥಾಲಯ ಅಥವಾ ಅಂಗನವಾಡಿ ಸೇರಿ ಸಾರ್ವಜನಿಕರಿಗೆ ಅನುಕೂಲವಾಗುವುದಕ್ಕೆ ಬಳಕೆಯಾಗಬೇಕು. ಈ ಅನಧಿಕೃತ ಕಟ್ಟಡವನ್ನು 15 ದಿನಗಳೊಳಗಾಗಿ ತೆರವುಗೊಳಿಸದಿದ್ದರೆ ಲಕ್ಷ್ಮೇಶ್ವರ ಸಾರ್ವಜನಿಕರೆಲ್ಲರೂ ಸೇರಿ ಹೋರಾಟ ಕೈಗೊಳ್ಳುತ್ತೇವೆ ಎಂದು ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಮುಖಾಂತರ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ತಹಸೀಲ್ದಾರರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.
Advertisement
ಈ ವೇಳೆ ಮಂಜುನಾಥ ಮಾಗಡಿ, ಗುರಪ್ಪ ಮುಳಗುಂದ, ಶಂಕ್ರಪ್ಪ ಮುಳಗುಂದ, ಶಿವಪ್ಪ ಡಂಬಳ, ಭರಮಪ್ಪ ಮ್ಯಾಗೇರಿ ಚಂದ್ರಶೇಖರ ದಾನಿ, ಮುತ್ತು ಮುಳಗುಂದ ಮುಂತಾದವರಿದ್ದರು.