ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಮಲ್ಲಸಮುದ್ರದ ರಾಣಿ ಚನ್ನಮ್ಮ ಪ್ರೌಢಶಾಲೆಯಲ್ಲಿ ಡೆಂಗೀ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹರ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಸಜ್ಜನರ ಮಾತನಾಡಿ, ಜ್ವರವಿದ್ದರೆ ಅಲಕ್ಷ್ಯ ಮಾಡದೇ ತಪಾಸಣೆ ಮಾಡಿಸಿ. ಮಳೆ ಆಗುತ್ತಿರುವುದರಿಂದ ಡೆಂಗೀ, ಚಿಕುನ್ ಗುನ್ಯಾಗಳಂತಹ ಕಾಯಿಲೆಗಳು ವೇಗವಾಗಿ ಹಬ್ಬುತ್ತವೆ. ಕಾರಣ, ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.
Advertisement
ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಪುಷ್ಪಾ ಪಾಟೀಲ ಮಾತನಾಡಿ, ಕೀಟಜನ್ಯ ರೋಗಗಳಾದ ಡೆಂಗೀ, ಚಿಕುನ್ಗುನ್ಯಾ ತಡೆಯಲು ರೋಗಗಳ ಬಗ್ಗೆ ಜಾಗೃತಿಯಿಂದ ಇರುವುದು ಅತ್ಯಗತ್ಯ ಎಂದು ತಿಳಿಸಿದರು.
ಸಮುದಾಯ ಆರೋಗ್ಯ ಅಧಿಕಾರಿ ರಾಧಿಕಾ ಶಾಪೂರ ಮಾತನಾಡಿ, ಕುಡಿದ ನೀರಿನ ಬಾಟಲ್ ಹಾಗೂ ಪ್ಲಾಸ್ಟಿಕ್ ಕಪ್ಗಳನ್ನು ಎಲ್ಲೆಂದರಲ್ಲಿ ಬಿಸಾಕದೆ ಸ್ವಚ್ಛತೆ ಕಾಪಾಡಿ ಎಂದು ತಿಳಿಸಿದರು.