HomeBidar2025ನೇ ಸಾಲಿನ ದಸರಾ ಧರ್ಮ ಸಮ್ಮೇಳನ ಬಸವಕಲ್ಯಾಣದಲ್ಲಿ ಜರುಗಿಸಲು ನಿರ್ಧಾರ: ರಂಭಾಪುರಿ ಶ್ರೀ

2025ನೇ ಸಾಲಿನ ದಸರಾ ಧರ್ಮ ಸಮ್ಮೇಳನ ಬಸವಕಲ್ಯಾಣದಲ್ಲಿ ಜರುಗಿಸಲು ನಿರ್ಧಾರ: ರಂಭಾಪುರಿ ಶ್ರೀ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬಸವಕಲ್ಯಾಣ: ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಮರಸ್ಯ ಬೆಳೆಸಿಕೊಂಡು ಬರುತ್ತಿರುವ ನಾಡಿನ ಜನಮನ ಸೂರೆಗೊಂಡಿರುವ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ 2025ನೇ ಸಾಲಿನ ದಸರಾ ಧರ್ಮ ಸಮ್ಮೇಳನವನ್ನು ಐತಿಹಾಸಿಕ ನಗರ ಬಸವಕಲ್ಯಾಣದಲ್ಲಿ ಜರುಗಿಸಲು ನಿರ್ಧರಿಸಲಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

ಅವರು ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಜರುಗಿದ ದಸರಾ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಇದುವರೆಗೆ ರಾಜ್ಯ, ಹೊರ ರಾಜ್ಯಗಳಲ್ಲಿ 33 ದಸರಾ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದು 34ನೇ ದಸರಾ ಮಹೋತ್ಸವ ಬಸವಕಲ್ಯಾಣದಲ್ಲಿ ಜರುಗುತ್ತಿರುವುದು ಸಂತಸ ತಂದಿದೆ. ತರೀಕೆರೆ, ಜಮಖಂಡಿ, ಬಳ್ಳಾರಿ ಸೇರಿದಂತೆ ಹಲವು ನಗರಗಳಲ್ಲಿ 34ನೇ ದಸರಾಕ್ಕೆ ಬೇಡಿಕೆ ಇದ್ದಾಗ್ಯೂ ಅಬ್ಬಿಗೇರಿ ದಸರಾದಲ್ಲಿ ಶಾಸಕ ಶರಣು ಸಲಗರ ಸಂಗಡಿಗರು ಮಾಡಿದ ವಿನಂತಿಯನ್ನು ಪರಿಗಣಿಸಿ ಬಸವಕಲ್ಯಾಣಕ್ಕೆ ನೀಡಲಾಗಿದೆ. ಈ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಸರ್ವ ಸಮಾಜದ ಬಾಂಧವರು ಶ್ರಮಿಸಿ ಐತಿಹಾಸಿಕ ಸಮಾರಂಭವನ್ನಾಗಿ ಮಾಡುವ ಅಗತ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ 34ನೇ ದಸರಾ ಸಮ್ಮೇಳನಕ್ಕೆ ರಚಿಸಿದ ಸ್ವಾಗತ ಸಮಿತಿಗೆ ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮಿಗಳನ್ನು ಗೌರವಾಧ್ಯಕ್ಷರನ್ನಾಗಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಇವರನ್ನು ಅಧ್ಯಕ್ಷರನ್ನಾಗಿ ಹಾಗೂ ಶಾಸಕ ಶರಣು ಸಲಗರ ಇವರನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಇನ್ನುಳಿದ ಉಪಸಮಿತಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದೆಂದು ತಿಳಿಸಿದರು.

ಹಿರೆನಾಗಾಂವನ ಜಯಶಾಂತಲಿAಗ ಸ್ವಾಮಿಗಳು ಮಾತನಾಡಿ ದಸರಾ ಮಹೋತ್ಸವಕ್ಕೆ ಶ್ರೀ ಮಠದಿಂದ ರೂ.೨.೫ ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದ್ದು ವಿಶೇಷವಾಗಿತ್ತು. ತ್ರಿಪುರಾಂತದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಶ್ರೀಮದ್ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಂತೆ ಸಮಾರಂಭದ ಯಶಸ್ಸಿಗೆ ಶ್ರಮಿಸುವುದಾಗಿ ಹೇಳಿದರು.

ಶಾಸಕ ಶರಣು ಸಲಗರ ಮಾತನಾಡಿ, ನಾಡಿನಲ್ಲಿ ಸಕಲ ಮನುಕುಲಕ್ಕೆ ಅಭ್ಯುದಯವನ್ನು ಬಯಸುತ್ತ ಬಂದಿರುವ ಈ ಅಪೂರ್ವ ದಸರಾ ಸಮಾರಂಭಕ್ಕೆ ಸರ್ವ ಸಮಾಜದವರ ಸಹಕಾರ ಅಗತ್ಯವಾಗಿದ್ದು ಎಲ್ಲರೂ ಸಹಕರಿಸಲು ವಿನಂತಿಸಿದರು. ವಿವಿಧ ಮುಖಂಡರು ಸೇರಿ ಒಟ್ಟು 51ಲಕ್ಷ ರೂ.ದೇಣಿಗೆ ವಾಗ್ದಾನ ಮಾಡಿದರು.

ಸಮಾರಂಭದಲ್ಲಿ ಶರಣಪ್ಪ ಬಿರಾದಾರ, ಬಸವರಾಜ ಕೋರಕೆ, ರಾಜಕುಮಾರ ಸಿಂಗಾಪುರ, ಸುನೀಲ ಪಾಟೀಲ್, ಮಲ್ಲಯ್ಯ ಹಿರೇಮಠ, ಸಿದ್ರಾಮಪ್ಪ ಗುದಗೆ, ಚಂದ್ರಶೇಖರ ಪಾಟೀಲ, ಮಲ್ಲಿನಾಥ ಹಿರೇಮಠ, ಸೋಮಶೇಖ ವಸ್ತçದ, ಶ್ರೀಕಾಂತ ಬಡದಾಳೆ, ಮೇಘರಾಕ ನಾಗರಾಳೆ, ವೀರಣ್ಣ ಶೀಲವಂತ, ಎಂ.ಕೆ. ನಂದಿ, ಎ.ಜಿ. ಪಾಟೀಲ್, ಸುಭಾಷ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ರಮೇಶ ರಾಜೋಳೆ ನಿರೂಪಣೆ ಮಾಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!