ವಿಜಯಸಾಕ್ಷಿ ಸುದ್ದಿ, ಗದಗ: ಪುಸ್ತಕಗಳು ನಮ್ಮಲ್ಲಿರುವ ಅಜ್ಞಾನವನ್ನು ದೂರಮಾಡಿ ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತವೆ. ಓದುವ ಹವ್ಯಾಸ ಬದುಕಿನ ಸನ್ಮಾರ್ಗದ ದಾರಿಯಾಗಿದ್ದು, ಎಲ್ಲರೂ ದಿನನಿತ್ಯ ಓದುವದನ್ನು ರೂಢಿಸಿಕೊಳ್ಳಬೇಕೆಂದು ಗದಗ ಓಂಕಾರಗಿರಿ ಹೀರೆಮಠದ ಶ್ರೀ ಷ.ಬ್ರ. ಫಕ್ಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಭಾಗ್ಯಶ್ರೀ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಜಂತಲಿ ಶಿರೂರು ವತಿಯಿಂದ ಗದುಗಿನ ಆದಿತ್ಯ ನಗರದದಲ್ಲಿರುವ ಓಂಕಾರಗಿರಿಯ ಶ್ರೀ ಓಂಕಾರೇಶ್ವರ ಹೀರೆಮಠದ ಸಭಾ ಭವನದಲ್ಲಿ ಜರುಗಿದ ಪ.ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳ ಪುಣ್ಯಾರಾಧನೆ ಹಾಗೂ ಪುಟ್ಟರಾಜ ಹಳ್ಳಿಕೇರಿಮಠ ಅವರ ಪ್ರಥಮ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ನಡೆದ `ಕವಿಗಳ ಸಂಗಮ-ಕಾವ್ಯ ಕಮ್ಮಟ-2025’ರ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಚನ್ನವೀರಸ್ವಾಮಿ ಹೀರೆಮಠ (ಕಡಣಿ) ಮಾತನಾಡಿ, ಸಮಾಜಮುಖಿಯಾಗಿ ಬದುಕುವುದು ಶ್ರೇಷ್ಠವಾದ ಜೀವನವಾಗಿದ್ದು, ಜಂತಲಿ ಶಿರೂರಿನ ಹಳ್ಳಿಕೇರಿಮಠ ಕುಟುಂಬ ಒಂದಿಲ್ಲೊAದು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಮೂಲಕ ನಾಡು-ನುಡಿಗಾಗಿ ಸೇವೆ ಸಲ್ಲಿಸುತ್ತಿರುವದು ಶ್ಲಾಘನೀಯ ಎಂದರು.
ಸಾಹಿತ್ಯ ಮತ್ತು ಸಮಾಜದ ಕುರಿತು ಉಪನ್ಯಾಸ ನೀಡಿದ ಮುಂಡರಗಿಯ ವಿಶ್ರಾಂತ ಪ್ರಾಧ್ಯಾಪಕರಾದ ಆರ್.ಎಲ್. ಪೊಲೀಸ್ಪಾಟೀಲ, ಸಮಾಜದಲ್ಲಿ ಭ್ರಷ್ಠತೆಯನ್ನು ದಮನ ಮಾಡಿ ನ್ಯಾಯ ಸಮ್ಮತವಾದ ಜೀವನ ನಡೆಸಲು ಸಾಹಿತ್ಯ ದೊಡ್ಡ ಶಕ್ತಿಯಾಗಿ ಕೆಲಸ ಮಾಡುತ್ತಿದೆ. ಸಾಹಿತ್ಯ ವ್ಯಕ್ತಿಯ ಸರ್ವತೋಮುಖ ವಿಕಸನದ ಜೀವನಾಡಿಯಾಗಿದ್ದು, ಕವಿಗಳು ಸಮಾಜದ ಓರೆ-ಕೋರೆಗಳನ್ನು ಸಾಹಿತ್ಯದ ಮೂಲಕ ತಿದ್ದುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಗದುಗಿನ ಸ.ಪ್ರ.ಮ ಕಾಲೇಜಿನ ಪ್ರೊ. ಎಸ್.ವಿ. ಸಜ್ಜನಶೆಟ್ಟರ ಗದಗ ಜಿಲ್ಲೆಯ ಕವಿಗಳ ಕುರಿತು ಉಪನ್ಯಾಸ ನೀಡುತ್ತಾ, ಗದಗ ಜಿಲ್ಲೆಯ ಕವಿಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಿದ್ದು, ಪ್ರತಿಯೊಂದು ಕಾಲಘಟ್ಟದಲ್ಲಿ ಕವಿಗಳು ವೈಶಿಷ್ಟ್ಯಪೂರ್ಣವಾದ ಗ್ರಂಥಗಳನ್ನು ರಚನೆ ಮಾಡುವದರ ಮೂಲಕ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಶೋಭಾ ಡಾ.ಬಸವರಾಜ ಮೇಟಿ, ಜಯ ಕರ್ನಾಟಕ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾAತ ಚವ್ಹಾಣ, ಕರ್ನಾಟಕ ರಾಜ್ಯ ಶ್ರೀ ಪುಟ್ಟರಾಜ ರೈತ ಸಂಘದ ಅಧ್ಯಕ್ಷ ಎಂ.ಪಿ. ಮುಳಗುಂದ, ಅಂದಾನಪ್ಪ ವಿಭೂತಿ, ಪಕೀರೇಶ್ವರ ಶಾಸ್ತಿçÃಗಳು ಹೀರೆಮಠ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕವಿಗಳನ್ನು ಸನ್ಮಾನಿಸಲಾಯಿತು. ಗೌಡಪ್ಪ ಬೊಮ್ಮಪ್ಪನವರ ಹಾಗೂ ವೀರಯ್ಯ ಹೊಸಮಠ ಪ್ರಾರ್ಥನಾ ಗೀತೆ ಹಾಡಿದರು.
ಮಲ್ಲೇಶ ಹೂಗಾರ ನಿರೂಪಿಸಿದರು. ಈಶ್ವರ ಲಕ್ಮೇಶ್ವರ ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ರಶ್ಮಿ ಅಂಗಡಿ, ಕವಿಗಳು ವಾಸ್ತವಿಕ ನೆಲೆಗಟ್ಟಿನಲ್ಲಿ ಕವಿತೆಗಳನ್ನು ರಚಿಸಬೇಕು. ಸಮಾಜದ ಜವಾಬ್ದಾರಿ ಹೊತ್ತು ಮುನ್ನಡೆಯಬೇಕೆಂದರಲ್ಲದೆ ಪುಟ್ಟರಾಜರ ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮ ಮಾದರಿಯಾಗಿದೆ ಎಂದರು.