ಧಾರವಾಡ: ಧಾರವಾಡದಲ್ಲಿ ಭಾನುವಾರ ಆರ್ಎಸ್ಎಸ್ನಿಂದ ನಡೆದ ಬೃಹತ್ ಪಥ ಸಂಚಲನ ಎಲ್ಲರ ಗಮನಸೆಳೆಯಿತು.
ಗಣವೇಷಧಾರಿಗಳಾಗಿ ಹೊರಟಿದ್ದ ಆರ್ಎಸ್ಎಸ್ ಕಾರ್ಯಕರ್ತರ ಮೇಲೆ ಮುಸ್ಲಿಂ ಸಮುದಾಯದ ಅನೇಕರು ಕೂಡ ಪುಷ್ಪಗಳನ್ನು ಹಾಕಿ ಶುಭ ಹಾರೈಸಿದರು.
ಪಥಸಂಚಲನ ಸಾಗುವ ದಾರಿಯಲ್ಲಿ ನಿಂತಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು ಕೂಡ ಗಣವೇಷಧಾರಿಗಳ ಮೇಲೆ ಪುಷ್ಪಗಳನ್ನು ಹಾಕಿದರು. ಮುಸ್ಲಿಂ ಸಮುದಾಯದ ಅನೇಕ ಪುರುಷರು ಕೂಡ ಗಣವೇಷಧಾರಿಗಳ ಮೇಲೆ ಪುಷ್ಪಗಳನ್ನು ಹಾಕಿ ಗಮನಸೆಳೆದರು.



