ವಿಜಯಸಾಕ್ಷಿ ಸುದ್ದಿ, ಮುಳಗುಂದ: ನಿತ್ಯ ಯೋಗಾಭ್ಯಾಸ ಮಾಡುವುದರಿಂದ ರೋಗಮುಕ್ತ ಜೀವನ ಹೊಂದಲು ಸಹಕಾರಿಯಾಗುತ್ತದೆ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಹೇಳಿದರು.
ಅವರು ಪಟ್ಟಣದ ಎಸ್ಜೆಜೆಎಂ ಸಂಯುಕ್ತ ಪದವಿಪೂರ್ವ ಮಾಹಾವಿದ್ಯಾಲಯದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ವಿಶ್ವಕ್ಕೆ ಭಾರತ ಯೋಗದ ಮಹತ್ವ ತಿಳಿಸಿದ ದೇಶವಾಗಿದ್ದು, ಇಂತಹ ಯೋಗದ ಮಹತ್ವನ್ನು ಬೇರೆ ಬೇರೆ ರಾಷ್ಟ್ರಗಳು ಅಳವಡಿಸಿಕೊಂಡು ಆರೋಗ್ಯ ಕ್ರಾಂತಿಯನ್ನು ಮಾಡುತ್ತಿವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ನಿತ್ಯ ಯೋಗಾಬ್ಯಾಸ ಮಾಡಿದಲ್ಲಿ ಭಾರತರ ಪ್ರತಿಯೊಬ್ಬ ಪ್ರಜೆಯೂ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ. ನಮ್ಮ ಪ್ರಧಾನಮಂತ್ರಿ ಮೋದಿಯವರು ಯೋಗದ ಮಹತ್ವನ್ನು ಮತ್ತಷ್ಟು ಪ್ರಚುರಪಡಿಸಿದರು. ಈ ನಿಟ್ಟಿನಲ್ಲಿ ಪಟ್ಟಣದ ಯೋಗ ಗುರು ಪ್ರಕಾಶ ಮದ್ದಿನ ನಿತ್ಯ ಉಚಿತ ಯೋಗಾಭ್ಯಾಸ ಮಾಡಿಸುತ್ತಿರುವುದು ಶ್ಲಾಘನೀಯ ಎಂದರು.
ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಮಕ್ಕಳು ನಿತ್ಯ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುವುದರ ಜೊತೆಯಲ್ಲಿ ಮಕ್ಕಳು ನಿತ್ಯ ಚೈತನ್ಯಶೀಲರಾಗಿ ಅಭ್ಯಾಸದಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಯೋಗ ದಿನಾಚರಣೆ ಅಂಗವಾಗಿ ಯೋಗ ಗುರು ಪ್ರಕಾಶ ಮದ್ದಿನ, ಸಿಪಿಐ ಸಂಗಮೇಶ ಶಿವಯೋಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಜಿಲ್ಲಾ ಯೋಜನಾಧಿಕಾರಿ ಕೇಶವ ದೇವಾಂಗ, ಎಂ.ಡಿ. ಬಟ್ಟೂರ ಇವರನ್ನು ಸನ್ಮಾನಿಸಲಾಯಿತು. ಅವ್ವ ಸೇವಾ ಪ್ರತಿಷ್ಠಾನದ ಮಂಜುನಾಥ ಮಟ್ಟಿ ಮಕ್ಕಳಿಗೆ ಮೊಳಕೆ ಒಡೆದ ಕಡಲೆ ಬೀಜಗಳನ್ನು ವಿತರಿಸಿದರು.
ಅಧ್ಯಕ್ಷತೆಯನ್ನು ಎಂ.ಡಿ. ಬಟ್ಟೂರ ವಹಿಸಿದ್ದರು. ಪ.ಪಂ ಸದಸ್ಯ ಎಸ್.ಸಿ. ಬಡ್ನಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೇಶವ ದೆವಾಂಗ್, ಸಂಗಮೇಶ ಶಿವಯೋಗಿ, ಡಾ. ಎಸ್.ಸಿ. ಚವಡಿ, ವಿಜಯ ನೀಲಗುಂದ, ಪುನೀತ ಓಲೇಕಾರ, ಬಸವರಾಜ ಹಾರೋಗೇರಿ, ಪರಶುರಾಮ ವಂಟಕರ, ಮಂಜುನಾಥ ಮಟ್ಟಿ, ಅನೂಪ್ ಕೆಂಚನಗೌಡರ, ಅಕ್ಕಮ್ಮಾ ನೀಲಗುಂದ, ಗೀತಾ ಜಾಧಾವ, ಶಾಂತಾ, ನಾಗವೇಣಿ ನಾಯರ, ಮಧು ಕೋರಿ, ಶಂಕರ ಹಡಗಲಿ ಇದ್ದರು.