ಗದಗ: ಗದಗ ನಗರದ ಇತಿಹಾಸ ಪ್ರಸಿದ್ಧ ಕಿಲ್ಲಾ ಶ್ರೀ ಜೋಡ ಹನಮಂತ ದೇವಸ್ಥಾನದ ವಿವಿಧ ಕಾಮಗಾರಿ ಹಾಗೂ ಜೀರ್ಣೋದ್ಧಾರ ಕಾರ್ಯಕ್ಕೆ ಸಚಿವರಾದ ಎಚ್.ಕೆ. ಪಾಟೀಲರು 20 ಲಕ್ಷ ರೂಪಾಯಿಗಳನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಬಿಡುಗಡೆ ಮಾಡಿದ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಯುಮ ಮುಖಂಡ ಕೃಷ್ಣಗೌಡ ಪಾಟೀಲ, ಟ್ರಸ್ಟಿಗಳಾದ ವಿಶ್ವನಾಥ ರಾಮನಕೊಪ್ಪ, ಪ್ರಮೋದ ರಾಯ್ಕರ್, ರಾಮಣ್ಣಾ ಬಾಕಳೆ, ಮಂಜುನಾಥ ಯಾಳಗಿಶೆಟ್ಟರ, ಆನಂದ ಸರ್ವದೆ, ಅಂಬಾಲಾಲಸಾ ಖೋಡೆ, ನಿರಂಜನ ಓಝಾ, ಬಸವರಾಜ ಪೂಜಾರ, ಪರಶುರಾಮ ದಲಬಂಜನ ಮುಂತಾದವರು ಇದ್ದರು.
Trending Now



