ನವದೆಹಲಿ:- ವೈಧ್ಯತೆ ನಮ್ಮ ಸಂಪ್ರದಾಯ. ಸಮುದಾಯಗಳನ್ನು ಕೆರಳಿಸುವುದು ಎಂದೂ ಸ್ವೀಕಾರಾರ್ಹವಲ್ಲ ಎಂದು ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
Advertisement
ಈ ಸಂಬಂಧ ಮಾತನಾಡಿದ ಅವರು, ಸಮುದಾಯಗಳನ್ನು ಕೆರಳಿಸುವುದು ಎಂದೂ ಸ್ವೀಕಾರಾರ್ಹವಲ್ಲ, ವೈಧ್ಯತೆ ನಮ್ಮ ಸಂಪ್ರದಾಯ. ಆಮದಿನ ಮೇಲಿನ ಅವಲಂಬನೆಯು ಕಡ್ಡಾಯವಾಗಬಾರದು ಮತ್ತು ಸ್ವದೇಶಿ ಅಥವಾ ಸ್ಥಳೀಯ ಉತ್ಪಾದನೆಗೆ ಪರ್ಯಾಯವಿಲ್ಲ ಎಂದು ಹೇಳಿದ್ದಾರೆ.
ಯಾವುದೇ ದೇಶವು ಪ್ರತ್ಯೇಕವಾಗಿ ಬದುಕಲು ಸಾಧ್ಯವಿಲ್ಲ, ಈ ಅವಲಂಬನೆಯು ಕಡ್ಡಾಯವಾಗಿ ಬದಲಾಗಬಾರದು. ನಾವು ಸ್ವದೇಶಿಯನ್ನು ಅವಲಂಬಿಸಿ ಸ್ವಾವಲಂಬನೆಯ ಮೇಲೆ ಗಮನಹರಿಸಬೇಕು, ಆದರೆ ನಮ್ಮ ಎಲ್ಲಾ ಸ್ನೇಹಪರ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು ಎಂದರು.