ರಾಮನಗರ ಜಿಲ್ಲೆ ಉದ್ಧಾರ ಆಗೋದು ಡಿಕೆಶಿ ಗೆ ಇಷ್ಟ ಇಲ್ಲ‌ – ರವಿಕುಮಾರ್

0
Spread the love

ಬೆಂಗಳೂರು;- ಕನಕಪುರವನ್ನು ಬೆಂಗಳೂರಿಗೆ ಸೇರಿಸುವುದರ ಹಿಂದೆ ಡಿಕೆಶಿ ಕುಟುಂಬವನ್ನು ಶ್ರೀಮಂತಗೊಳಿಸುವ ಹುನ್ನಾರ ಇದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದ್ದಾರೆ

Advertisement

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಹೇಳಿಕೆ ನೀಡಿದ್ದಾರೆ. ಅವರಿಗೆ ರಾಮನಗರ ಜಿಲ್ಲೆ ಉದ್ಧಾರ ಆಗೋದು ಇಷ್ಟ ಇಲ್ಲ‌. ರಾಮನಗರ ಜಿಲ್ಲೆಯನ್ನು ಹೇಗೆ ಕ್ಷೀಣ ಮಾಡಬಹುದು ಅಂತ ಯೋಚನೆ ಮಾಡುತ್ತಿದ್ದಾರೆ. ಕನಕಪುರ ಬೆಂಗಳೂರು ಗ್ರಾಮಾಂತರ ಅಷ್ಟೇ ಅಲ್ಲ. ನಗರಕ್ಕೆ ಸೇರಿಸಬೇಕು ಅನ್ನೋದು ಅವರ ಚಿಂತನೆ ಎಂದರು.

ಅಭಿವೃದ್ಧಿ ಮಾಡಬೇಕು ಅಂದರೆ ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿ. ಜಿಲ್ಲೆಗೆ ನಿಮ್ಮ ಕೊಡುಗೆ ಏನು?, ಕನಕಪುರ ತಾಲೂಕಿನ ಬಗ್ಗೆ ಯಾಕಿಷ್ಟು ಕಾಳಜಿ ಎಂದು ಪ್ರಶ್ನಿಸಿದರು. ಚಾಮರಾಜನಗರ ಜಿಲ್ಲೆಯಾಗಲು ನಮ್ಮ ಬಿಜೆಪಿ ಸರ್ಕಾರ ಕಾರಣ. ಬರ, ವಿದ್ಯುತ್ ಬಗ್ಗೆ ಯಾಕೆ ಯೋಚನೆ ಮಾಡುತ್ತಿಲ್ಲ. ಇಷ್ಟು ಸ್ವಾರ್ಥ ರಾಜಕಾರಣಿಯನ್ನು ನಾನು ನೋಡಿಲ್ಲ ಎಂದು ಟೀಕಿಸಿದರು.


Spread the love

LEAVE A REPLY

Please enter your comment!
Please enter your name here