ವಿಜಯಸಾಕ್ಷಿ ಸುದ್ದಿ, ಗದಗ: ಲಯನ್ಸ್ ಕ್ಲಬ್ನ ಪದಾಧಿಕಾರಿಗಳು ಮತ್ತು ಸದಸ್ಯರು ಸಮಾಜಮುಖಿ ಹಾಗೂ ಜನಮುಖಿಯಾಗಿ ಕಾರ್ಯ ಮಾಡಬೇಕೆಂದು ಲಯನ್ಸ್ ಕ್ಲಬ್ನ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ. ರವಿ ನಾಡಗೇರ ಹೇಳಿದರು.
ಅವರು ಬುಧವಾರ ಲಯನ್ಸ್ ಶಾಲೆಯ ಸಭಾಂಗಣದಲ್ಲಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್ನ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ಸಮಾಜ ಸೇವೆ ಮಾಡುವ ಮೂಲಕ ಅದರಲ್ಲಿ ಸಂತೃಪ್ತ ಭಾವನೆ ಕಾಣಲು ಇಂತಹ ಸಾಮಾಜಿಕ ಸಂಘಟನೆಗಳು ವೇದಿಕೆಯನ್ನು ಒದಗಿಸಬಲ್ಲವು. ಕ್ಲಬ್ಗಳಲ್ಲಿ ಎಲ್ಲರೂ ಸಂಘಟಿಕರಾಗಿ ಸೇರುವುದರಿಂದ ಸ್ನೇಹ ಬೆಳೆಯುವದರ ಜೊತೆಗೆ ನಾಯಕತ್ವದ ಗುಣಗಳು ಬೆಳೆದು ಬರುವವು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಯನ್ಸ್ ಕ್ಲಬ್ನ ನಿಕಟಪೂರ್ವ ಜಿಲ್ಲಾ ಗವರ್ನರ್ಗಳಾದ ಆನಂದ ಪೋತ್ನೀಸ್ ಹಾಗೂ ಸುಗ್ಗಲಾ ಯಳಮಲಿ ಮಾತನಾಡಿ, ಕ್ಲಬ್ನ ಪದಾಧಿಕಾರಿಗಳು, ಸದಸ್ಯರು ಕ್ಲಬ್ನ ಬಲವರ್ಧನೆಗೆ ಶ್ರಮಿಸಬೇಕು. ತನ್ಮೂಲಕ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡು ಜನತೆಗೆ ಹಾಗೂ ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳನ್ನು ಮಾಡಬೇಕೆಂದರು.
ಗದಗ-ಬೆಟಗೇರಿ ಲಯನ್ಸ್ ಕ್ಲಬ್ನ ಲೇಡಿಸ್ ವಿಂಗ್ನ ಅಧ್ಯಕ್ಷೆಯಾಗಿ ಪೂಜಾ ಪಾಟೀಲ, ಕಾರ್ಯದರ್ಶಿಯಾಗಿ ಸುರೇಖಾ ಮಲ್ಲಾಡದ, ಖಜಾಂಚಿಯಾಗಿ ಸಹನಾ ಹಿರೇಮಠ ಅಧಿಕಾರ ವಹಿಸಿಕೊಂಡರು.
ಕನಿಷ್ಕ್ ಸುಲಾಖೆ ಪ್ರಾರ್ಥಿಸಿದರು. ನಿತೀಶ್ ಸಾಲಿ ಸ್ವಾಗತಿಸಿದರು, ಸಾವಿತ್ರಿ ಶಿಗ್ಲಿ ಹಾಗೂ ವೀಣಾ ಸುಲಾಖೆ ನಿರೂಪಿಸಿದರು. ರಾಜಣ್ಣ ಮಲ್ಲಾಡದ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್ನ ಸರ್ವ ಸದಸ್ಯರು, ಗಣ್ಯರು ಪಾಲ್ಗೊಂಡಿದ್ದರು.
ಕ್ಲಬ್ನ ನೂತನ ಅಧ್ಯಕ್ಷರಾಗಿ ರಾಜು ವೇರ್ಣೆಕರ, ಉಪಾಧ್ಯಕ್ಷರಾಗಿ ಪ್ರವೀಣ ವಾರಕರ, ಡಾ. ನವೀನ ಹಿರೇಗೌಡ್ರ, ಡಾ. ತುಕಾರಾಮ ಸೂರಿ, ನಿಕಟಪೂರ್ವ ಅಧ್ಯಕ್ಷರಾಗಿ ನಿತೀಶ್ ಸಾಲಿ, ಕಾರ್ಯದರ್ಶಿಯಾಗಿ ರಾಜಣ್ಣ ಮಲ್ಲಾಡದ, ಜಂಟಿ ಕಾರ್ಯದರ್ಶಿಯಾಗಿ ಲಿಂಗರಾಜ ತೋಟದ, ಖಜಾಂಚಿಯಾಗಿ ರೇಣುಕಪ್ರಸಾದ ಹಿರೇಮಠ, ಸಹ ಖಜಾಂಚಿಯಾಗಿ ರೇಣುಕಪ್ರಸಾದ ಶಿಗ್ಲಿಮಠ ಅಧಿಕಾರ ವಹಿಸಿಕೊಂಡರು.