ಕಾಶ್ಮೀರದ ಕೇಸರಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ, ಬೇಡಿಕೆಯು ಭಾರತದ ಮೂಲೆ ಮೂಲೆಯಲ್ಲಿದೆ. ಅದರ ಬೆಲೆಯಿಂದಾಗಿ ಅನೇಕ ಜನರು ಇದರ ಲಾಭವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ ಅವರಿಗೂ ಆಯ್ಕೆ ಇದೆ. ಕೇಸರಿಯು ಅನೇಕ ವರ್ಷಗಳಿಂದ ರಾಜಮನೆತನದ ಅತ್ಯುತ್ತಮ ಪದಾರ್ಥವಾಗಿದೆ. ಜನರು ಇದನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುತ್ತಾರೆ. ಇದು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ, ಇದು ಚರ್ಮದ ಕಪ್ಪಾಗುವಿಕೆಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.
ಮೊಡವೆಗಳಿಂದ ಮುಕ್ತಿ ಇತ್ತೀಚಿನ ದಿನಗಳಲ್ಲಿ, ಮೊಡವೆಗಳ ಸಮಸ್ಯೆ ಪ್ರತಿಯೊಬ್ಬ ಯುವಕರಿಗೂ ಬರಲಾರಂಭಿಸಿದೆ, ರಾಸಾಯನಿಕಯುಕ್ತ ಕ್ರೀಮ್ ಮತ್ತು ಫೇಸ್ ವಾಶ್ ಬಳಕೆಯೇ ಇದಕ್ಕೆ ಕಾರಣ. ಅಂತಹ ಪರಿಸ್ಥಿತಿಯಲ್ಲಿ, ನೀವು ಖಂಡಿತವಾಗಿಯೂ ಈ ನೈಸರ್ಗಿಕ ಮೂಲಿಕೆಯನ್ನು ಬಳಸಬೇಕು. ಇದಕ್ಕಾಗಿ ಕೇಸರಿ ಮತ್ತು ತುಳಸಿಯನ್ನು ರುಬ್ಬಿಕೊಂಡು ಮಲಗುವಾಗ ಮುಖಕ್ಕೆ ಹಚ್ಚಿಕೊಳ್ಳಿ. ಶೀಘ್ರದಲ್ಲೇ ನೀವು ನಿಮ್ಮ ಮೊಡವೆಗಳಿಗೆ ಗುಡ್ ಬೈ ಹೇಳುವಿರಿ.
ನಿಮ್ಮ ಹೃದಯಕ್ಕೆ ಒಳ್ಳೆಯದು
ಒಂದು ದಳ ಕೇಸರಿಯನ್ನು ಹಾಲಿನಲ್ಲಿ ಸೇರಿಸುವುದರಿಂದ ಅದು ನಿಮ್ಮ ಹೃದಯಕ್ಕೆ ಅದ್ಭುತವಾಗಿರುತ್ತದೆ. ’ಗುಣಕಾರಕ ಆಹಾರಗಳು’ ಎನ್ನುವ ಪುಸ್ತಕದ ಪ್ರಕಾರ ಇದು ರಕ್ತ ಪರಿಚಲನೆಯನ್ನು ಪ್ರಚೋದಿಸುತ್ತದೆ, ರಕ್ತನಾಳಗಳು ಗಟ್ಟಿಯಾಗುವುದನ್ನು ತಡೆಯುತ್ತದೆ. ಇದು ಕ್ರೊಸೆಟಿನ್ ಎನ್ನುವ ಸಕ್ರಿಯ ಸಂಯುಕ್ತ ಪದಾರ್ಥವನ್ನು ಹೊಂದಿದ್ದು, ಇದು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟಲು ನೆರವಾಗುತ್ತದೆ.
ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ
ನೀವು ಪ್ರತಿದಿನ ಕೇಸರಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ನಿಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಕೇಸರಿ ಅತ್ಯುತ್ತಮವಾದ ನೆನಪಿನ ಶಕ್ತಿ ಪ್ರಚೋದಕವಾಗಿದೆ. ಅಧ್ಯಯನವೊಂದರ ಪ್ರಕಾರ ಇದು ಆಲ್ಜೀಮರ್ಸ್ ರೋಗದ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ತಡೆಗಟ್ಟಲು ಪ್ರಾಕೃತಿಕ ಪರಿಹಾರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಕೇಸರಿ ಹಿಪ್ಪೋಕ್ಯಾಂಪಸ್ ನಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ತಡೆಯುವ ಮೂಲಕ, ನೆನಪಿನ ಶಕ್ತಿ ಹೆಚ್ಚಿಸುತ್ತದೆ.
ನೆಗಡಿಯ ವಿರುದ್ಧ ರಕ್ಷಣೆ ನೀಡುತ್ತದೆ
ಕೇಸರಿ ಹಾಲು ಜ್ವರ ಮತ್ತು ನೆಗಡಿಯನ್ನು ಗುಣಪಡಿಸಲು ಪರಿಣಾಮಕಾರಿ ಪೇಯವಾಗಿದೆ. ಆರೋಗ್ಯ ತಜ್ಞರ ಪ್ರಕಾರ, ನಾವು ಹಣೆಯ ಮೇಲೆ ಕೇಸರಿ ಬೆರೆಸಿದ ಹಾಲನ್ನು ಹಚ್ಚುವುದರಿಂದ ಶೀಘ್ರವಾಗಿ ನೆಗಡಿಯಿಂದ ಉಪಶಮನ ದೊರೆಯುತ್ತದೆ. ಕೇಸರಿ ಹಾಲು ಅನೇಕ ಗುಣಕಾರಕ ಲಕ್ಷಣಗಳನ್ನು ಹೊಂದಿದ್ದು, ಇದು ನೆಗಡಿ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ನಿದ್ರಾಹೀನತೆಗೆ ಚಿಕಿತ್ಸೆ ನೀಡಲು ನೆರವಾಗುತ್ತದೆ
ಕೇಸರಿ ಹಾಲು ಸರಿಯಾಗಿ ನಿದ್ರಿಸಲು ಕಷ್ಟಪಡುವ ವ್ಯಕ್ತಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಸ್ಯಾಫ್ರನಾಲ್, ಪೈಕ್ರೋಕ್ರೋಸಿನ್ ಮತ್ತು ಕ್ರೋಸಿನ್ ನಂತಹ ಸಂಭಾವ್ಯ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುವುದರಿಂದ ನಿಮ್ಮ ಆರೋಗ್ಯ ಸಮಸ್ಯೆಗಳನ್ನು ದೂರದಲ್ಲಿಡುತ್ತದೆ. ಕೇಸರಿ ಬೆರೆಸಿದ ಹಾಲು ಅಥವಾ ಟೀ ನಿದ್ರಾಹೀನತೆಯನ್ನು ಗುಣಪಡಿಸಿ, ಖಿನ್ನತೆಗೂ ಉಪಶಮನ ನೀಡುತ್ತದೆ. ಈ ಮಸಾಲೆ ಮ್ಯಾಂಗನೀಸ್ ಅನ್ನು ಸಮೃದ್ಧವಾಗಿ ಹೊಂದಿದ್ದು, ಇದು ನಿದ್ರೆಯನ್ನು ಪ್ರಚೋದಿಸಲು ಅಲ್ಪ ಮಂಪರುಕಾರಕ ಗುಣವನ್ನು ಹೊಂದಿದೆ.
ಋತುಸ್ರಾವದ ಅವಧಿಯ ನೋವನ್ನು ಕಡಿಮೆ ಮಾಡುತ್ತದೆ
ಪುರಾತನ ಕಾಲದಿಂದ, ಋತುಸ್ರಾವದ ನುಲಿತ ಮತ್ತು ಹೊಟ್ಟೆನೋವನ್ನು ಅನುಭವಿಸುವ ಮಹಿಳೆಯರು ಮತ್ತು ಹುಡುಗಿಯರು,ಉಪಶಮನ ಪಡೆಯಲು ಬೆಚ್ಚನೆಯ ಪ್ರಕೃತಿ ಹೊಂದಿರುವ ಪೇಯ ಅಥವಾ ಆಹಾರವನ್ನು ಸೇವಿಸುತ್ತಾ ಬಂದಿದ್ದಾರೆ. ಬೆಚ್ಚಗಿನ ಕೇಸರಿ ಹಾಲು ಮಹಿಳೆಯರಿಗೆ ಹೊಟ್ಟೆನೋವು ಮತ್ತು ಋತುಸ್ರಾವದ ನುಲಿತಗಳಿಂದ ಉಪಶಮನ ನೀಡುತ್ತದೆ.